Wednesday, August 19, 2015

ಕನ್ನಡದ #ಉಪ್ಪಿ-2 ಮತ್ತದರ ಡಬ್ಬಿಂಗ್ ವರ್ಷನ್ ತೆಲುಗಿನ #ಉಪೇಂದ್ರ-2 (#ఉపేంద్ర-2) - ನಾವ್ ನೋಡಿ ಅರ್ಥ ಮಾಡಿಕೊಂಡ ರೀತಿಯಲ್ಲಿ

ಕನ್ನಡದ #ಉಪ್ಪಿ-2 ಮತ್ತದರ ಡಬ್ಬಿಂಗ್ ವರ್ಷನ್ ತೆಲುಗಿನ  #ಉಪೇಂದ್ರ-2 (#ఉపేంద్ర-2) - ನಾವ್ ನೋಡಿ ಅರ್ಥ ಮಾಡಿಕೊಂಡ ರೀತಿಯಲ್ಲಿ ಮತ್ತೇ ನನ್ನ ಫೇಸ್ಬುಕ್ಕ್ ಮಿತ್ರ @Gopi Prabhu ವಿನ ಅರ್ಥೈಸುವಿಕೆಯೂ ಇದೇ.
***************************************************
.
.
ವರ್ತಮಾನದಲ್ಲಿ ಜೀವಿಸುವುದೇ ಆನಂದದ ಸಂಗತಿ. ವರ್ತಮಾನದಲ್ಲಿ ಜೀವಂತವಾಗಿರುವುದೇ ಬದುಕಿನ ಅತ್ಯಂತ ಆನಂದದ ವಿಷಯ ಎಂಬುದು ನಿಮ್ಮ ಆಂತರ್ಯದೊಳಗೆ ಇಳಿಯಬೇಕು. ಬದುಕಿನ ಪ್ರತಿಕ್ಷಣದಲ್ಲೂ ‘ಓಹ್! ನಾನಿನ್ನೂ ಬದುಕಿದ್ದೇನೆ- ಇದೇ

ವಿಶೇಷ!’ ಎನಿಸುವಂತಾದರೆ ನಿಮಗೆ ಮತ್ತೇನು ಬೇಕು?
.
.
ಈ ಸಿನೆಮಾ ಮತ್ತದರ ಕಥೆ ನಿಂತಿರೋದೇ ಭೂತ, ವರ್ತಮಾನ, ಭವಿಷ್ಯತ್ ಕಾಲಗಳ ಬಗೆಗೆ ನಾವ್ ಯೋಚಿಸೋ ರೀತಿಯಲ್ಲಿನ ನೆಲೆಗಟ್ಟಿನ ಮೇಲೇ.

ಭೂತಕಾಲದ #ನಾನು ಎಂಬ ಉಪ್ಪಿ-1 / ಉಪೇಂದ್ರ-1, ವರ್ತಮಾನದ #ನೀನು ಎಂಬ ಉಪೇಂದ್ರ-2 / ಉಪೇಂದ್ರ-2, , ಹಾಗೂ ಭವಿಷ್ಯತ್ ಕಾಲದ #ಅವನು ಅನ್ನೋ ಉಪ್ಪಿ / ಉಪೇಂದ್ರ ಎಂಬ ವ್ಯಕ್ತಿಯ ಬಗೆಗಿನ ಕಥೆಯೇ ಈ ಸಿನೆಮಾದ ಕಥಾವಸ್ತು.
.
.
* ನಾನಿದನ್ನ ಮಾಡೇ ಮಾಡ್ತಿನಿ ಅನ್ನೋ ಸಂಕಲ್ಪಶಕ್ತಿ ಅನ್ನೋದೊಂದಿದ್ದರೆ, ಯಾವುದೇ ವ್ಯಕ್ತಿ ಏನಾದರು ಸಹ ಮಾಡಬಲ್ಲ. ಮನಸ್ಸಿದ್ದರೇ ಮಾರ್ಗ ಅನ್ನೋದನ್ನ ಈ ಸಿನೆಮಾ ಹೇಳುತ್ತೆ.


* ಹಳೇದನ್ನೇ ನೆನುಸ್ಕೊಂತಾ ಕೂರ‍್ಬೇಡಿ,  ಜಾಸ್ತಿ ಯೋಚ್ನೆ ಮಾಡ್ಬೇಡಿ ನಾಳಿನ ಬಗ್ಗೆ;  ಆದರೆ ವಾಸ್ತವದಲ್ಲಿ, ವರ್ತಮಾನದಲ್ಲಿ ಹೇಗಿದಿರೋ ಹಾಗೇ ಏನನ್ನೂ ಜಾಸ್ತಿ ಯೋಚಿಸದೇ, ತಲೆಗಚ್ಚಿಕೊಳ್ಳದೇ ಬದುಕಿ ಅನ್ನುತ್ತೆ ಈ ಸಿನೆಮಾ.


*ದುಡ್ಡಿದ್ರೆ (#ಲಕ್ಷ್ಮಿ) ಮಾತ್ರ #ಖುಷಿ ಅನ್ನೋದು ನಮ್ಮಲ್ಲಿನ ಬಹುತೇಕರ ನಂಬಿಕೆ ಮತ್ತು ವಾದ ಕೂಡ. ಆದ್ರೆ ಯಾರೂ ಸಹ, ಖುಷಿಯಿದ್ದರೇ ಲಕ್ಷ್ಮಿಯೂ (ದುಡ್ಡು) ಸಹ ಬರ‍್ತಾಳೆ ಅನ್ನೋದನ್ನ ನಂಬೋದೇ ಇಲ್ಲಾ
.
.
ಈ ಸಿನೆಮಾದಲ್ಲಿ #ನಾನು ಎನ್ನುವವ ಹಳೆಯ, ಭೂತಕಾಲದ ಉಪೇಂದ್ರ; #ಅವನು ಅನ್ನೋನು ಭವಿಷ್ಯತ್ ಕಾಲದ ಬೇಹುಗಾರಿಕೆ ನಡೆಸುವ ಪೊಲೀಸ್ ಅಧಿಕಾರಿ; ಮತ್ತು, #ನೀನು ಎಂಬುವವನು ಇಂದಿನ ವಾಸ್ತವದಲ್ಲಿ ಬದುಕುವ , ಸದಾ ಹಸನ್ಮುಖಿಯಾಗಿ ತನ್ನ

ಕುಟುಂಬದವರೊಂದಿಗೆ ಬದುಕುವ ಉಪೇಂದ್ರ.
.
.
.
ತನಗೇನ್ ಬೇಕೋ ಅದನ್ನೆಲ್ಲಾ, ಏನ್ ಮಾಡಿಯಾದ್ರೂ ಸರಿ ದಕ್ಕಿಸಿಕೊಳ್ಳೋನು ಹಳೇ ಉಪೇಂದ್ರ-1. ಆ ಹಳೇ "ನಾನು" ಎಂಬುವವನ ಬಗ್ಗೆ ಒಬ್ಬ ವಿಲನ್ ಯಾವಾಗ್ಲೂ ಯೋಚ್ನೆ ಮಾಡ್ತಾ ಇರ‍್ತಾನೆ, ವಾಸ್ತವದಲ್ಲಿ ಆ "ನಾನು" ಇರೋದೇ ಇಲ್ಲಾ, ಆತನದು

ಮುಗಿದೋದ ಕಥೆ, ಆದ್ರೆ, ವಿಲನ್ ಪ್ರಕಾರ ಆತ ಇನ್ನೂ ಇದಾನೆ ಅನ್ನೋ ಕಾಲ್ಪನಿಕ ನಂಬಿಕೆ (ಸಿನೆಮಾದ ದೃಷ್ಯವೊಂದರಲ್ಲಿ, ಆ ವಿಲನ್ ಕೇವಲ "ನಾನು" ಬಗ್ಗೆ ಕನವರಿಸ್ತಾ ಇರ‍್ತಾನೆ, ಆತ ತನಗೆ ಎಂಗೆಲ್ಲಾ ಹೊಡೆದ ಅಂತಾ. ಇದೇ ವಿಲನ್ನಿಗೆ ಉಪೇಂದ್ರ-1

ಸಿನೆಮಾದಲ್ಲಿ "ನಾನು" ಎಕ್ಕಾ ಮಕ್ಕಾ ಚಚ್ಚಿರ‍್ತಾನೆ)
.
.
#ಅವನು ಅನ್ನೋನು ಭವಿಷ್ಯತ್ ಕಾಲದ ಉಪೇಂದ್ರ ಮತ್ತು ಆತ ಬೇಹುಗಾರಿಕೆ ನಡೆಸುವ ಪೊಲೀಸ್ ಅಧಿಕಾರಿ. ಭಾರತಕ್ಕೆ ಬಾರದೇ, ದುಬೈನಲ್ಲಿ ಕುಳಿತು ಭೂಗತ ಜಗತ್ತನ್ನ ನಿಯಂತ್ರಿಸೋ ಸಲೀಂ ಅನ್ನೋ ವಿಲನ್ನಿಗೆ ಮಾತ್ರ ಈ ಉಪೇಂದ್ರ ಅಂದ್ರೆ "ಅವನು".

ಹಾಗಾಗಿ, ಈ ಸಲೀಂ ಯಾವತ್ತೂ ಸಹ, ನೆನ್ನೆ ಇರದಿದ್ದ, ಇಂದೂ ಸಹ ಇರದ, ನಾಳೆ ಇರಬೋದಾದ ಕಾಲ್ಪನಿಕ ವ್ಯಕ್ತಿಯ ಬಗ್ಗೇ ಚಿಂತೆ ಮಾಡ್ತಾ ಇರ‍್ತಾನೆ.
.
.
ಮತ್ತೇ ಕೊನೆಯವನಾಗಿ ಕಥಾನಾಯಕನಾದ #ನೀನು ಎನ್ನುವ ಉಪೇಂದ್ರ. ಈತ ಮಾತ್ರ ಯೋಚ್ನೆ ಮಾಡದೇ ಇಲ್ಲಾ, ಮತ್ತೀತ ವಾಸ್ತವದಲ್ಲಿ, ಸದ್ಯಕ್ಕೆ ಮಾತ್ರ ಬದ್ಕಿರ‍್ತಾನೆ.


ಆಗರ್ಭ ಶ್ರೀಮಂತನನೊಬ್ಬನ ವಿಧವಾ ಹೆಂಡತಿಯಾದ #ಮಂದಾಕಿನಿ ಮಾತ್ರ ಈ ಉಪೇಂದ್ರನನ್ನ "ನೀನು" ಅಂತಲೇ ಅಂದ್ಕೊಂಡಿರ‍್ತಾಳೆ. ಆದರೆ, ಆಕೆಯ ಮಗಳಾದ ಲಕ್ಷ್ಮಿಗೆ / ಖುಷಿಗೆ ಮಾತ್ರ ಈ "ನೀನು", "ನಾನು", "ಅವನು" ಅನ್ನೋ ಮೂವರು ಉಪೇಂದ್ರದ

ಬಗ್ಗೆ ಕನ್ಪ್ಯೂಷನ್ನ್ ಆಗಿ, ಈ ಮೂವರಲ್ಲಿ ನಿಜ ಉಪೇಂದ್ರ ಯಾರೂ ಅಂತಾ ಮಾತ್ರ ಕನ್ಪ್ಯೂಷನ್ನ್ ಇರುತ್ತೆ.
.
.
"ನೀನು" ಅನ್ನೋ ಉಪೇಂದ್ರನನ್ನ ಹೊರತುಪಡಿಸಿ,  ಈ ಸಿನೆಮಾದ ಉಳಿದ ಎಲ್ಲಾ ಪಾತ್ರಗಳಿಗೂ ಲಕ್ಷ್ಮಿ ಮತ್ತು ಖುಷಿ ಅನ್ನೋರು, ಇಬ್ಬರು ಬೇರೆ ಬೇರೆ ವ್ಯಕ್ತಿಗಳಾಗಿ ಕಾಣಿಸ್ತಾರೆ. ಆದ್ರೆ "ನೀನುಗೆ" ಮಾತ್ರ ಲಕ್ಷ್ಮಿಯೂ, ಖುಷಿಯೂ ಒಂದೇ ವ್ಯಕ್ತಿ.
ಇಲ್ಲಿನ ಪ್ರತೀ ಕ್ಯಾರೆಕ್ಟರ್‍ರಿಗೆ ಲಕ್ಷ್ಮಿ ಅನ್ನೋ ವ್ಯಕ್ತಿ ಬಗ್ಗೆ ಗೊತ್ತಿರುತ್ತೆ, ಆದ್ರೆ ಅವ್ರಿಗೆಲ್ಲಾ ಈ ಲಕ್ಷ್ಮಿಯ ಮೂಲಕ, ಮಂದಾಕಿನಯ ಮಗಳಾದ ಖುಷಿಯನ್ನ ಪಡೆಯಬೇಕೆಂಬ ಹಂಬಲ, ಯಾಕೆಂದರೇ ಆಕೆಯ ಆಗರ್ಭ ಶ್ರೀಮಂತೆ ಮಂದಾಕಿನಿಯ ಮಗಳು ಅನ್ನೋ

ಕಾರಣಕ್ಕೆ.

ಆದ್ರೆ "ನೀನು" ಎಂಬ ಉಪ್ಪಿ ಮಾತ್ರ ತನ್ನ ಲಕ್ಷ್ಮಿಯಲ್ಲೇ ಖುಷಿಯನ್ನ ಕಂಡುಕೊಂಡವಂ. ಅದೇನೆಂದರೆ ಆತನ ವಿಲ್ ಅರ್ಥಾತ್ ಸಂಕಲ್ಪ ಶಕ್ತಿ, ಮನಸ್ಸು. ಆದ್ರೆ, ಉಳಿದೆಲ್ಲಾ ಪಾತ್ರವರ್ಗಗಳು ವಿಲ್ ಅಂದ್ರೆ, ಅದು ಮಂದಾಕಿನಿ ಬರೆದಿಟ್ಟ ಉಯಿಲು ಪತ್ರ

ಅಂದ್ಕೊಂಡಿರ‍್ತಾರೆ.
.
.
ಈ ಸಿನೆಮಾ ನೋಡೋ ಬಹುತೇಕರಿಗೆ ಕನ್ಪ್ಯೂಷನ್ ಆಗೊದ್ ಮಾತ್ರ ಗ್ಯಾರೆಂಟಿ, ಕೆಲವರಿಗೆ ಹೆಚ್ಚು ಕನ್ಪ್ಯೂಷನ್, ಮತ್ತ್ ಕೆಲವರಿಗೆ ಕಡಿಮೆ ಕನ್ಪ್ಯೂಷನ್, ಬೆರಳೆಕೆಯಷ್ಟು ಜನರಿಗೆ ನೋ ಕನ್ಪ್ಯೂಷನ್, ಸುಮಾರ್ ಜನಕ್ಕ್ ತಲೆಬುಡವಿಲ್ಲದ, ಲಾಜಿಕ್‍ಲೆಸ್ಸ್, ಲಿಂಕ್

ಲೆಸ್ಸ್ ಸಿನೆಮಾ ಅನ್ಸುತ್ತೆ. ಯಾಕಂದ್ರೇ ಲೋಕೋಭಿನ್ನ ರುಚಿ (ಉಪ್ಪು) ಅಲ್ವಾ, ಹಾಗಾಗಿ.

ಈ ಸಿನೆಮಾದಲ್ಲಿ ಭೂತ ಮತ್ತು ಭವಿಷ್ಯತ್ತ್, ಈ ಎರಡೂ ಕಡೆ ಬರೋ ಪಾತ್ರಗಳು ಮಾತ್ರ ಆಯುಧಗಳ ಸಹಾಯದಿಂದ, ದರ್ಪದಿಂದ, ರೌಡಿಸಂನಿಂದ, ಮಂದಾಕಿನಿಯ ಮಗಳಾದ ಖುಷಿಯನ್ನ ಪಡಿಯಕ್ಕೆ ಪ್ರಯತ್ನ ಮಾಡಿರ‍್ತಾರೆ ಮತ್ತಂತಾ ಪ್ರಯತ್ನದಲ್ಲಿ ಅವರು

ನಂಬಿಕೆಯನ್ನೂ ಮಡಿಕ್ಕಂಡಿರ‍್ತಾರೆ.
.
.
ನಿರ್ದೇಶಕನಾಗಿ ಉಪ್ಪಿ ಈ ಸಿನೆಮಾದಲ್ಲಿ ಏನ್ ಹೇಳಕ್ಕ್ ಹೊಂಟಿದಾನಪ್ಪಾ ಅಂದ್ರೆ, "ಈ ಖುಷಿ, ಸಂತೋಷಗಳನ್ನ, ನಾವು ಕೇವಲ ಹಳೇದನ್ನ ನೆನುಸ್ಕೊಂಡು, ನಾಳಿನದರ ಬಗ್ಗೇ ಸುಖಾಸುಮ್ಮನೇ ಚಿಂತೆ ಮಾಡ್ಕಂದ್ ಪಡಿಯಕ್ಕಾಗಲ್ಲಾ" ಅಂತಾ.

ಹಳೇ ಉಪೇಂದ್ರ-1 ಸಿನೆಮಾದ ವಿಲನ್ನ್ ಯಾವತ್ತೂ ಸಹ ಇಲ್ಲದ ಆ "ನಾನು" ಎಂಬುವವನ ಬಗ್ಗೇನೇ ಚಿಂತೆ ಮಾಡ್ತಾ, ಅವನೊಂದಿಗೆ ಹೊಡೆದಾಡ್ತಾ ಇರ‍್ತಾನೆ.
ಇನ್ನು ದುಬೈನಲ್ಲಿರೋ ಭೂಗತ ಲೋಕದ ನಾಯಕ ಕಮ್ಮ್ ವಿಲ್ಲನ್, ಇಲ್ಲಿನ ಸಿಐಡಿ ಮತ್ತು ಪೊಲೀಸರು ಮಾತ್ರ,  ಇಲ್ಲದ #ಅವನು ಅನ್ನೋ ಭವಿಷ್ಯತ್ತಿನ ಕಾಲ್ಪನಿಕ ಉಪೇಂದ್ರನ ಬಗ್ಗೇ ಯೋಚೆನೆ ಮಾಡ್ತಾ, ಅವನೊಂದಿಗೆ ಹೊಡೆದಾಡ್ತಾ ಇರ‍್ತಾರೆ.
.
.
ಈ ಎಲ್ಲಾ ಗಲಾಟೆಗಳು, ಹೊಡೆದಾಟಗಳು ನಡಿಯದಾದ್ರೂ ಯಾಕೇ ಈ  ಉಪೇಂದ್ರ - 2 ಸಿನೆಮಾದಲ್ಲಿ.  ಅಂತಾ ನೋಡಕ್ಕ್ ಹೊಂಟ್ರೆ ,  ಈ ಎಲ್ಲಾ ಹೊದೆದಾಟಗಳಿಗೆ ಕಾರಣ "ಅವ್ರಿಗೆಲ್ಲಾ ಖುಷಿ ಬೇಕು, ಐ ಮೀನ್ ಖುಷಿ ಅನ್ನೋ ಹುಡುಗಿ". ಅಂಗಾದ್ರೆ, ಆ ಖುಷಿ

ಯಾಕ್ ಬೇಕು?, ಐ ಮೀನ್ ಖುಷಿ ಅನ್ನೋ ಹುಡುಗಿ ಯಾಕ್ ಬೇಕು? ಅವ್ರಿಗೆಲ್ಲಾ ಅಂದ್ರೆ, ಅದರಿಂದ / ಅವಳಿಂದ ಅವರೆಲ್ಲರ ಜೀವನ ಶೈಲಿಯೇ ಬದಲಾಗುತ್ತೆ ಅಂತಾ. ಯಾಕಂದ್ರೇ, ಆಕೆ ಆಗರ್ಭ ಶ್ರೀಮಂತೆ ಮಂದಾಕಿನಿಯ ಮಗಳು ಅನ್ನೋದು ಎಲ್ಲರ ನಂಬಿಕೆ.
.
.
ಒಂದೇ ಒಂದು ಹೊಡೆದಾಟವನ್ನ ಹೊರತು ಪಡಿಸಿ,  ಈ ಸಿನೆಮಾದಲ್ಲಿ ನಡಿಯೋ ಎಲ್ಲಾ ಹೊಡೆದಾಟಗಳು ವಾಸ್ತವದ್ದವಲ್ಲಾ. ಬದಲಿಗೆ ಆಯಾ ಪಾತ್ರಗಳು ತಮ್ಮ ತಮ್ಮಲ್ಲಿ ಕಲ್ಪಿಸಿಕೊಳ್ಳೋ ಭೂತಕಾಲದ "ನಾನು" ಮತ್ತು ಭವಿಷ್ಯತ್ತ್ ಕಾಲದ "ಅವನು" ಅನ್ನೋ

ಉಪೇಂದ್ರನೊಂದಿಗೆ ನಡೆಸೋ ಹೊಡೆದಾಟಗಳಷ್ಟೇ.
.
.
ಸಿನೆಮಾದ ಮೊದಲಿಗೆ ಒಂದ್ ವಿಲ್ಲ್ (Will) ಬಗ್ಗೆ ತೋರುಸ್ತಾರೆ, ಸಿನೆಮಾದ ಕೊನೆಯೂ ಸಹ ಅದೇ. ಆ ವಿಲ್ಲಲ್ಲಿರೋ ಖುಷಿನಾ ಖಳನಾಯಕರು ಒಂದು ಹುಡುಗಿ ಅಂತಾ ಹುಡಿಕಿದರೆ, ನಾಯಕ ಅದನ್ನ ಖುಷಿ ಅಂತಾ ಲಕ್ಷ್ಮಿಯಲ್ಲಿ ಹುಡುಕ್ತಾನೆ. ಮತ್ತು ವಿಲ್ಲ್

ಅನ್ನೋದನ್ನ ಖಳನಾಯಕರು ಉಯಿಲು ಅಂದ್ಕಂಡ್ರೆ, ನಾಯಕ ಮಾತ್ರ ಅದನ್ನ ಲಕ್ಷ್ಮಿಯ ಖುಷಿಗಾಗಿ ಇರೋ ಸಂಕಲ್ಪಶಕ್ತಿ ಇದು ಅಂದ್ಕೋತಾನೆ.

ನಾವೆಲ್ಲಾ ಈ ಸಿನೆಮಾದ ಖಳನಾಯಕರ ತರ: ಸಿನೆಮಾ ನೋಡೋದ್ರಿಂದ, ಏನ್ ಸಿನ್ಮಾ ಸಿವಾ ಇದು ಅಂದ್ಕೋತೀವಿ.

ಮಂದಾಕಿನಿ ಬರೆದಿರೋ ಆ ವಿಲ್ಲ್ ಏನ್ ಹೇಳುತ್ತಪ್ಪಾ ಅಂದ್ರೆ " ತನ್ನ ಮಗಳಾದ ಖುಷಿಯನ್ನ ಯಾರ್ ಮದ್ವೆ ಆಗ್ತಾರೋ, ಅವ್ರಿಗೆ ಆಕೆಯ ಎಲ್ಲಾ ಆಸ್ತಿ ಸೇರುತ್ತೆ" ಅಂತಾ. ಆ ಮಂದಾಕಿನಿ ಕೇವಲ ಸುಳಿವನ್ನ ನೀಡಿರ‍್ತಾಳೋ ಹೊರತು, ಯೋಚ್ನೆ ಮಾಡಿ

ಅಂತೇಳಿರಲ್ಲಾ ಆ ವಿಲ್ಲಿನಲ್ಲಿ.
.
.
ಈ ಸಿನೆಮಾದ ಎಲ್ಲಾ ಪಾತ್ರಗಳೂ ಬರೀ ಯೋಚ್ನೆ ಮಾಡ್ತಾನೇ ಇರ‍್ತವೇ, ಅಂಗಾಗಿ ಅವರ‍್ಯಾರಿಗೂ ಆ ಖುಷಿ ಸಿಗೋದೇ ಇಲ್ಲಾ. ಆದರೆ ನಾಯಕನಾದ "ನೀನು" ಎಂಬ ಉಪೇಂದ್ರ ಮಾತ್ರ, ಆ ಮಂದಾಕಿನಿ ಬರೆದಿರೋ ಆ ವಿಲ್ಲನ್ನ ಸರಿಯಾಗಿ ಅರ್ಥೈಸಿಕೊಂಡು, ಆ

ಪ್ರಕಾರವೇ ನಡಿತಾನೆ, ಹಾಗಾಗಿ ಅವನಿಗೆ ಸರಿಯಾದ ದಾರಿ ತಿಳಿಯುತ್ತೆ. ನೀನು ಹತ್ತಿರ ಖುಷಿ ಇದ್ದಿಂದ್ರಂದಲೇ, ಲಕ್ಷ್ಮಿ ಅವನತ್ರ ಬರ‍್ತಾಳೆ.
.
.
ಇದರ ಬಗ್ಗೆ ಇನ್ನೂ ವಿವರವಾಗಿ ತಿಳಿಯಕ್ಕೆ, ಕೆಲ ಸನ್ನಿವೇಶಗಳನ್ನ ತಗಳಣ;
"ನೀನುವಿನ" ತಂಗಿಯನ್ನ ಯಾರೋ ಒಬ್ಬ ಕಿಡಿಗೇಡಿ ಕಾಲೇಜಿನಲ್ಲಿ ಚುಡಾಯಿಸ್ತಾ ಇರ‍್ತಾನೆ, ಆಕೆಗೆ ಕಾಟ ಕೊಡ್ತಾ ಇರ‍್ತಾನೆ ಅಂತಾ, ಆಕೆ ತನ್ನ ಅಣ್ಣನಾದ "ನೀನುವಿನ" ಹತ್ತಿರ ಹೇಳಿದಾಗ, ಆಗ "ನೀನು" ಆಕೆಗೆ "ಆ ಕಿಡಿಗೇಡಿಯ ಬಗ್ಗೆ ನೀ ಯೋಚಿಸಲೇ ಬೇಡ,

ಸುಮ್ನಿರು" ಅಂದಾಗ ಆಕೇ ಹಾಗೇ ಮಾಡ್ತಾಳೆ. ಮರುದಿನ, ಯಾರೋ ಆ ಕಿಡಿಗೇಡಿಯನ್ನ ಕೊಂದಾಕ್ತಾರೆ.

ಹಾಗಿದ್ರೇ, ಆತನನ್ನ ಕೊಂದಿದ್ಯಾರು?

ಆತನನ್ನ ಕೊಂದಿದ್ದು ಮಂದಾಕಿನಿಯ ಕಡೆಯ ರೌಡಿಗಳು, ಯಾಕಂದ್ರೆ, "ನೀನು", ಆ ಮಂದಾಕಿನಿಯ ವಿಲ್ಲನ್ನ ಫಾಲೋ ಮಾಡ್ತಾ ಇರ‍್ತಾನೆ, ಅದು ಮಂದಾಕಿನಿ "ನೀನುವಿಗೆ" ಮಾಡೋ ಸಹಾಯ.

ಇನ್ನೊಂದು ಸನ್ನಿವೇಶ;
ನಾಯಕನಾದ "ನೀನುವನ್ನ", ಪೊಲೀಸರು ಒಂದ್ಸಲ ಬಂಧಿಸಕ್ಕ್ ಬಂದಾಗ, ಅವರಿಗೆ ಎಲ್ಲಿಂದಲೋ, ಯಾರಿಂದಲೋ ಒಂದ್ ಪೋನ್ ಕರೆ ಬರುತ್ತೆ, ಆ ಕರೆಯಲ್ಲಿ ಈ "ನೀನುವನ್ನ" ಬಂಧಿಸಬೇಡಿ ಅಂತಾ ಆಙ್ಞೆ ಬರುತ್ತೆ. ಆ ಕರೆ ಮಾಡೋದು ಬೇರಾರೂ ಅಲ್ಲಾ,

ಬದಲಿಗೆ ಮಂದಾಕಿನೆಯೇ, ಯಾಕಂದ್ರೇ ಆಕೆಯ ವಿಲ್ಲ್ ಪ್ರಕಾರ ನಡಿತಾ ಇರೋನು ಈ "ನೀನು" ಮಾತ್ರ.

ಈ ಸಿನೆಮಾದಲ್ಲಿ "ನೀನು" ಎಂಬ ವ್ಯಕ್ತಿ ಮಾತ್ರ ವಾಸ್ತವ ಹಾಗೂ ಸತ್ಯ, ಉಳಿಕೆ "ನಾನು" ಮತ್ತು "ಅವನು" ಅವಾಸ್ತವಿಕ ಅಥವಾ ಕಾಲ್ಪನಿಕ ಭೂತಕಾಲದ, ಭವಿಷ್ಯತ್ ಕಾಲದ ಪಾತ್ರಗಳು, ಬೇರೆ ಬೇರೇ ವ್ಯಕ್ತಿಗಳ ಕಲ್ಪನೆಯಲ್ಲಿ ಮಾತ್ರ.
ಆ "ನೀನು" ಎಂಬುವವ ವರ್ತಮಾನದಲ್ಲಿ ಮಾತ್ರ ಬದುಕುವವ, ಹಾಗಾಗಿ ಸಿನೆಮಾದ ಕೊನೆಯಲ್ಲಿ ಆತ ಲಕ್ಷ್ಮಿಯೊಂದಿಗೆ ಮಾತಾಡ್ತಾ ಇರ‍್ತಾನೆ, ಇಬ್ರೂ ಖುಷಿ ಖುಷಿಯಾಗಿ.
.
.
ಸಿನೆಮಾದ ಕೊನೆಯಲ್ಲಿ "ನೀನು" ಎನ್ನುವ ಕಥಾನಾಯಕ ಉಪೇಂದ್ರ, "ನಾನು" ಮತ್ತು "ಅವನು" ಕೇವಲ ಕಾಲ್ಪನಿಕ ಪಾತ್ರಗಳು ಮತ್ತವು ನಿಜವಲ್ಲ ಅಂತಾ ನಾಯಕಿ ಲಕ್ಷ್ಮಿ / ಖುಷಿಗೆ ಹೇಳ್ತಾನೆ.
.
.
ನನ್ನ ಹಳೆಯದರ ಬಗ್ಗೆ ನೀವ್ ಯೋಚಿಸಿಕೊಂಡು, ಅದನ್ನೇ ಕಲ್ಪಿಸಿಕೊಂಡರೆ, ನನ್ನಲ್ಲಿ ನೀವು ’ನಾನು’ವನ್ನ ಕಾಣ್ತೀರಾ!

ನನ್ನ ಭವಿಷ್ಯದ ಬಗ್ಗೆ ನೀವ್ ಯೋಚಿಸಿಕೊಂಡು, ಅದನ್ನೇ ಕಲ್ಪಿಸಿಕೊಂಡರೆ,  ನನ್ನಲ್ಲಿ ನೀವು ’ಅವನನ್ನು’ ಕಾಣ್ತೀರಾ!

ನನ್ನ ವಾಸ್ತವದ ನೈಜತೆಯನ್ನ ಅನುಭವಿಸುವವರಿಗೆ ಮಾತ್ರ, ನನ್ನಲ್ಲಿ ನೀವು "ನೀನುವನ್ನ" ಕಾಣ್ತಿರಾ!


ಈ ಸಿನೆಮಾದಲ್ಲಿ ಭಗವದ್ಗೀತೆಯ ಒಂದು ಎಳೆಯನ್ನಿಟ್ಟುಕೊಂಡು, ಸಂಪೂರ್ಣ ಸಿನೆಮಾ ಮಾಡಲಾಗಿದೆ, ಹಾಗಾಗಿ ಕೆಲವರಿಗೆ ಅರ್ಥವಾಗುತ್ತೆ ಸಿನೆಮಾ, ಮತ್ತ್ ಕೆಲವರಿಗೆ ಅರ್ಥವಾಗಲ್ಲ
--------------

ವರ್ತಮಾನನ ಬಗ್ಗೆ ಅಲ್ಲಲ್ಲಿ ಎಕ್ಕಿ ತಂದ ಸಾಲುಗಳು ಕೆಳಗಿವೆ, ಓದ್ಕಳಿ
******************************************

ವರ್ತಮಾನ ಮಾತ್ರ ಸತ್ಯ: ಏನು ಮಾಡಿಕೊಂಡಿರುವೆ ನಿನ್ನ ಬದುಕನ್ನು? ಗಮನಿಸು. ಬದುಕು ಎಷ್ಟೊಂದು ಶ್ರೀಮಂತವಾಗಿದೆ. ಆದರೆ ನೀನು ಮಾತ್ರ ಬರಡು ಹೃದಯದಿಂದ ಬದುಕನ್ನು ಎದುರಿಸುತ್ತಿದ್ದಿ
.
.
ವರ್ತಮಾನದಲ್ಲಿ ಬದುಕಿ: ಶಾಂತಿ ಮತ್ತು ಸಂತೋಷ ದಕ್ಕುವುದು ನಾವು ‘ಈಗ’ ಬದುಕಿದಾಗ. ವರ್ತಮಾನವನ್ನು ಹಿಡಿಯುವುದು ಕಷ್ಟ. ಇದನ್ನು ವ್ಯಾಖ್ಯಾನಿಸುವುದು ಇನ್ನೂ ಕಷ್ಟ. ಯಾಕೆಂದರೆ, ಯಾವುದನ್ನು ವರ್ತಮಾನ ಎಂದು ವಿವರಿಸಲು

ಹೊರಡುತ್ತೇವೋ ಆ ವೇಳೆಗಾಗಲೇ ಅದು ಭೂತವಾಗಿರುತ್ತದೆ
.
.
ಭೂತಕ್ಕೆ ಅರ್ಥವಿಲ್ಲ, ಅದು ನಮ್ಮ ಮಿದುಳು ಹಿ೦ದಿನ ವರ್ತಮಾನವನ್ನು, ಈ ವರ್ತಮಾನದಲ್ಲಿ ಓದುವುದಷ್ಟೆ. "Amnesia" ಬ೦ದವರ ಭೂತಕಾಲವು ಮಾಯವಾಗುವುದು ತಿಳಿದಿರಬೇಕಲ್ಲವೆ? ಹಾಗೆಯೆ ಭವಿಷ್ಯ ಎ೦ಬುದು ವರ್ತಮಾನದಲ್ಲಿ ಭೂತಕಾಲದ

ಘಟನಾವಳಿಯನ್ನು ಆಧಾರವಾಗಿ ಇಟ್ಟುಕೊ೦ಡು ಮಾಡುವ ಒ೦ದು ಊಹೆ."Interpolation made in the present, of past recordings stored in the present". ಆದ್ದರಿ೦ದ ಭವಿಷ್ಯ ಅನಾಮತ್ತಾಗಿ

ಬದಲಾಗಬಹುದು. ಇರುವ ಸತ್ಯವೊ೦ದೆ.ವರ್ತಮಾನ.
.
.
ನಿಮ್ಮಲ್ಲಿ ಮಡುಗಟ್ಟಿದ ನೋವಿಗೆ ವಿದಾಯ ಹೇಳಬೇಕಾದರೆ ನೋವಿನೊಂದಿಗೆ ಬದುಕುವುದನ್ನು ಕಲಿಯಬೇಕು. ಸಂಪೂರ್ಣ ವರ್ತಮಾನದಲ್ಲಿದ್ದಾಗಲೇ ಭೂತದ ಹೊರೆ ಕಳಚುವುದು ಸಾಧ್ಯ.
.
.
ಕಾಲದ ಸೀಮೆಯಲ್ಲಿ ಭೂತವು ವರ್ತಮಾನದೊಂದಿಗೆ -ವರ್ತಮಾನವು ಭವಿಷ್ಯದೊಂದಿಗೆ ಇರುವುದು ಮಾತ್ರ ತಿಳಿಯುತ್ತದೆ
.
.
ಭೂತಕಾಲದ ವೀಕ್ಷಕ ಇನ್ನಿಲ್ಲವಾದಾಗ ವಾಸ್ತವ ಎಂಬ ಕೇವಲ ಜ್ಞಾನ ಸಾಕಾರವಾಗುತ್ತದೆ. ವರ್ತಮಾನದಲ್ಲಿ ತೊಡಗಿಕೊಂಡ 'ಏನಿರುತ್ತದೋ ಅದ'ಕ್ಕೆ ವೀಕ್ಷಕನಂತೆ ಕಾಲದ ಸಂಕೋಲೆಗಳು ಬಂಧಿಸುವುದಿಲ್ಲ. ನಿದ್ದೆಯ ಹೊತ್ತಿನಲ್ಲಿ ಮನಸ್ಸು- ಬುದ್ಧಿ ಮತ್ತು

ದೇಹಗಳು ಒಂದು ಸಮಗ್ರ ವ್ಯವಸ್ಥೆಗೊಳಪಟ್ಟಿರುವಂತೆ, ಜಾಗೃತರಾಗಿದ್ದಾಗಲೂ ಶಬ್ದಗಳಿಲ್ಲದ ಸ್ಥಿತಿ ಮತ್ತು ಕಾಲವಿಲ್ಲದ  ಚಲನೆಯ ಆಯಾಮವನ್ನು ಪಡೆಯುವ ವ್ಯವಸ್ಥೆ ಅದು. ಇದೆಲ್ಲ ರಂಜನೀಯವಾದ ಕನಸಲ್ಲ. ಅಮೂರ್ತರೂಪದ ಪಲಾಯನವೂ ಅಲ್ಲ.

ನಿಜ ಅರ್ಥದಲ್ಲಿ ಧ್ಯಾನ ಎಂಬುದರ ಸಮೀಕರಿಸಿದ ರೂಪ ಇದು. ಅಂದರೆ ಎಚ್ಚರದಲ್ಲಿ ನಡೆಯುತ್ತಿರಬಹುದು ಅಥವಾ ನಿದ್ದಿಸುತ್ತಿದ್ದಾಗಲೂ ಮೆದುಳು ಎಚ್ಚರವಾಗಿರುತ್ತದೆ.
.
.
ಪ್ರಶ್ನಿಸುವುದು, ಅಡಚಣೆ ಮಾಡುವುದು, ಎಚ್ಚರಿಸುವುದು, ತಿಳಿದುಕೊಳ್ಳುವುದೆಲ್ಲ ಸವಾಲಿನೊಂದಿಗೆ ಬರುವ ಸಹಜ ಗುಣ. ಆದರೆ ಸವಾಲು ಎಂಬುದೇ ಭೂತಕಾಲದ ಹಳೆಯ ಸರಕಾದಾಗ ವರ್ತಮಾನಕ್ಕೆ ಜಾಗವಿರುವುದಿಲ್ಲ. ಅನುಭವ ಜನ್ಯ ತೀರ್ಮಾನಗಳು

ಪರಿಶೀಲಿಸುವ ಗುಣಕ್ಕೆ ಮಂಕು ಹಿಡಿಸುತ್ತವೆ.  ಪರಿಶೀಲನೆಯ ಸಾಧ್ಯತೆಗಳನ್ನು ಸೀಮಿತಗೊಳಿಸುತ್ತವೆ.
.
.
ಭೂತವನ್ನು ವರ್ತಮಾನದಲ್ಲಿ ಬದಲಿಸಿ ಭವಿಷ್ಯವನ್ನು ಹೆಣೆಯುವ ಪ್ರಕ್ರಿಯೆ ನಡೆಯುತ್ತಿರುತ್ತದೆ- ಅದುವೇ ಕಾಲ.


Tuesday, July 14, 2015

#ಬಾಹುಬಲಿ ಅಲಿಯಾಸ್ #ಕಟ್ಟಪ್ಪ - ನಾ ನೋಡಿದ ಸಿನೆಮಾ, ನಾ ನೋಡಿದ ರೀತಿಯಲ್ಲಿ

#ಬಾಹುಬಲಿ ಅಲಿಯಾಸ್ #ಕಟ್ಟಪ್ಪ - ನಾ ನೋಡಿದ ಸಿನೆಮಾ, ನಾ ನೋಡಿದ ರೀತಿಯಲ್ಲಿ
*****************************************************
 ಮಹಾಭಾರತದ ಎರಡು ಪ್ರಮುಖ ಪಾತ್ರಗಳು. #ಧೃತರಾಷ್ಟ, #ಪಾಂಡು.
.
.
ಧೃತರಾಷ್ಟನ ಅತಿಯಾದ ಪುತ್ರಪ್ರೇಮ, ಪಾಂಡುವಿನ ಮಕ್ಕಳಿಂದ ಸಾಮ್ರಾಜ್ಯವನ್ನ ಮೋಸದಿಂದ ಕಿತ್ಕೊಳ್ಳೋ ತರ ಮಾಡ್ತು. ತಾನು ಕುರುಡ ಎನ್ನುವ ಕಾರಣಕ್ಕೆ, ನಂಗೇ ರಾಜ್ಯಾಧಿಕಾರ ಸಿಗಲಿಲ್ಲಾ, ಅಂಗಾಗಿ, ನನ್ನ ಮಗನಿಗಾದರೂ ಸಿಗಲಿ ಅನ್ನೋದು ಧೃತರಾಷ್ಟನ ವಾದ. ಆದ್ರೆ, ರಾಜನಾಗೋಕ್ಕೇ ಬೇಕಾದ ಗುಣಗಳು ಧುರ್ಯೋಧನನಲ್ಲಿ ಇಲ್ಲಾ ಅನ್ನೋದು ಹಿರಿಯರ, ಜನರ ಅಭಿಮತ.


ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲಾ ಅನ್ನೋದು ಮಾತಾದ್ರೂ, ಕುಂತಿಯ ಆ ಮಕ್ಕಳು, ಕೆಲ ಕಾಲ ಧರ್ಮದಿಂದ ರಾಜ್ಯವನ್ನ ಆಳಿ, ಆ ರಾಜ್ಯವನ್ನ ಉತ್ತುಗ್ಗಂಕೊಯ್ದರು ಅನ್ನೋದು ಸಹ ಅಷ್ಟೇ ಸತ್ಯ.
.
.
ತೆಲುಗಿನ, #ಬಾಹುಬಲಿ ಚಿತ್ರವನ್ನ ನೋಡಿದಾಗ, ನನಗಂತೂ ಧೃತರಾಷ್ಟನ ಪುತ್ರಪ್ರೇಮ, ಪಾಂಡವರ ಪರಿಪಾಟಲು ನೆನಪಿಗ್ ಬಂತು.
.
.
ಸಿನ್ಮಾ ಶುರುವಾಗ್ತಿದ್ದ ಹಾಗೇ, ರಾಜಮಾತೆ #ಶಿವಗಾಮಿ (ರಮ್ಯಕೃಷ್ಣ) ತನ್ನದೇ ಸಾಮ್ರಾಜ್ಯದ (#ಮಾಹಿಷ್ಮತಿ) ಭಟರಿಂದ ಮಗುವೊಂದನ್ನು (ಮಾಹಿಷ್ಮತಿ ಸಾಮ್ರಾಜ್ಯದ  #ಅಮರೇಂದ್ರಬಾಹುಬಲಿಯ ಮಗ) ರಕ್ಷಿಸಲು, ತಪ್ಪಿಸಿಕೊಂಡು ಬರ‍್ತಾ ಇರ‍್ತಾಳೆ, ತಾನು ಗಾಯಗೊಂಡಿದ್ದರೂ, ವೀರಾವೇಶದಿಂದ ಆ  ಮಗುವನ್ನು ಕಾಪಾಡಿ, ನೀರಲ್ಲಿ ಮುಳುಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದರೂ ಸಹ, ತನ್ನ ಆತ್ಮಶಕ್ತಿಯೋ, ಇಲ್ಲಾ ಬೇರಾವ ಶಕ್ತಿಯ ಕಾರಣದಿಂದಲೋ, ತನ್ನ ಕೈಯಲ್ಲಿ ಆ ಮಗುವನ್ನ ಹಾಗೇ ನೀರಲ್ಲಿ ಹಿಡಿದುಕೊಂಡು,  ಅದನ್ನ ಅಲ್ಲೇ ಜಲಪಾತದ ಕೆಳಗೆ ವಾಸಿಸುವ ಕಾಡ ಜನರ ಹತ್ತಿರಕ್ಕೆ ಸೇರಿಸಿ ತಾನು ನೀರಲ್ಲ್ ಹೊಂಟೋಗ್ತಾಳೆ, ಆ ಮಗು #ಶಿವುಡು (ಪ್ರಭಾಸ್) ಹೆಸರಿನಲ್ಲಿ ಕಾಡುಜನರ ಜೊತೆಯಲ್ಲಿ ಬೆಳೆಯುತ್ತಾನೆ.
.
.
ಶಿವುಡುವಿಗೆ (ಪ್ರಭಾಸ್) ತಾನು ವಾಸಿಸುವ ಜಾಗದ ಪಕ್ಕದಲ್ಲೇ ಇರುವ, ಬೃಹತ್ ಜಲಪಾತದ ಆಚೆ ಏನಿರಬೋದು ಅನ್ನೋ ಕುತೂಹಲ ದಿನೇ ದಿನೇ ಕಾಡ್ತಾ ಇರುತ್ತೆ, ಹಾಗಾಗಿ, ಆ ಜಲಪಾತದ ಆಚೆಗೆ ಹೋಗಲು ಆತ ವಿಫಲ ಪ್ರಯತ್ನಗಳನ್ನ ನಡೆಸ್ತಾ ಇರ‍್ತಾನೆ. ಹಾಗೇ, ಒಂದ್ಸಲ, ಜಲಪಾತದ ಮೇಲಿಂದ ಬಂದಂತಾ ಮುಖವಾಡವೊಂದು ಸಿಕ್ಕಿ ಆ ಮುಖವಾಡದ ಹಿಂದಿನ ಆಕೃತಿ ಯಾವುದು ಅನ್ನೋದನ್ನ ಕಂಡಿಡಿಯಕ್ಕೆ , ಆತ ಜಲಪಾತವನ್ನ ಏರಿ, ಆ ಕಡೆ ಇರೋ #ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಸಾಮ್ರಾಜ್ಯಕ್ಕೆ ತಲುಪಿ ಬಿಡುತ್ತಾನೆ. ಅಲ್ಲಿನ ಜಲಪಾತದ ದೃಶ್ಯ, ಕಾಡಿನ ದೃಶ್ಯ, ನೈಜತೇ ಅನ್ನೋ ತರ ಮೂಡಿ ಬಂದಿವೆ.
.
.
ಅಲ್ಲಿಗೆ ತಲುಪಿದ ಅವನಿಗೆ #ಅವಂತಿಕ (ತಮನ್ನ) ಸಿಗುತ್ತಾಳೆ. ಆಕೆ ಮತ್ತವರ ಕಡೆಯವರು, ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಸೆರೆಯಾಳಾಗಿ ಶಿಕ್ಷೆ ಅನುಭವಿಸುತ್ತಿರುವ, ಅಮರೇಂದ್ರ ಬಾಹುಬಲಿಯ (ಪ್ರಭಾಸ್) ಪತ್ನಿಯಾದ / ರಾಣಿಯಾದ #ದೇವಸೇನಳನ್ನ (ಅನುಷ್ಕಾ), ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಕಪಿಮುಷ್ಟಿಯಿಂದ ಬಿಡಿಸಿ ತರಲು ನಾನಾ ಯೋಜನೆಗಳನ್ನ ಹಾಕಿಕೊಂಡು, ವಿಫಲರಾಗಿರುತ್ತಾರೆ. ಆ ಸಮಯದಲ್ಲೇ, ಈ ಶಿವುಡು (ಪ್ರಭಾಸ್) ಮತ್ತು ಅವಂತಿಕಳ (ತಮನ್ನ) ಮಧ್ಯೆ ಘಟಿಸಿದ ಪ್ರೇಮದಿಂದ, ಅವಂತಿಕಳಿಗೆ (ತಮನ್ನ) ವಹಿಸಿದ್ದ ದೇವಸೇನಳ (ಅನುಷ್ಕಾ) ಬಿಡುಗಡೆಯ ಕಾರ್ಯವನ್ನ,  ಈ ಶಿವುಡು (ಪ್ರಭಾಸ್) ತಾನು ವಹಿಸಿಕೊಂಡು ಮಾಹಿಷ್ಮತಿಯ ಅರಮನೆಗೆ ಹೊರಡುತ್ತಾನೆ.
.
.
ಆಗ ಅಲ್ಲಿ, ಬಲ್ಲಾಳದೇವನ (ರಾಣಾ ದುಗ್ಗಬಾಟಿ) ದೊಡ್ಡ ಪ್ರತಿಮೆಯನ್ನು ಮೇಲೆತ್ತಿ ನಿಲ್ಲಿಸಲು ಜನರು ತುಂಬಾ ಶ್ರಮಪಡುತ್ತಿರುತ್ತಾರೆ, ಮತ್ತದರಲ್ಲಿ ಅವರು ವಿಫಲರಾಗಿ, ಆ ಪ್ರತಿಮೆಗೆ ಕಟ್ಟಿರೋ ಹಗ್ಗವನ್ನ ಬಿಟ್ಟುಬಿಡುತ್ತಾರೆ. ಆಗ, ಸಡನ್ನಾಗಿ ಬಂದ ಈ ಶಿವುಡು (ಪ್ರಭಾಸ್) ಜನರ ಮೇಲೆ  ಬೀಳುತ್ತಿರುವ ಪ್ರತಿಮೆಯನ್ನು, ಅದಕ್ಕೆ ಕಟ್ಟಿರುವ ಹಗ್ಗದಿಂದ ಹಿಡಿದು, ಆ ಜನರಿಗೆ ಸಹಕರಿಸುತ್ತಾನೆ. ಆಗ ಅಲ್ಲಿ ಇವನ ಮುಖ ನೋಡಿದ ಜನರು "ಬಾಹುಬಲಿ, ಬಾಹುಬಲಿ" ಅಂತಾ ಕೂಗ್ತಾ ಇರ‍್ತಾರೆ. ಆದ್ರೆ, ಬಾಹುಬಲಿ ಅಂದ್ರೆ ಯಾರೂ, ಏನೂ, ಎತ್ತಾ ಎಂಬುದರ ಪರಿವೆಯಿಲ್ಲದ ಶಿವುಡು (ಪ್ರಭಾಸ್), ಮಾಹಿಷ್ಮತಿಯ ಯುವರಾಜ (ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಮಗ) ಮತ್ತು ಸೇನಾಪತಿ #ಕಟ್ಟಪ್ಪ (ಸತ್ಯರಾಜ್) ನಿಂದ ತಪ್ಪಿಸಿಕೊಂಡು, ದೇವಸೇನಳನ್ನು (ಅನುಷ್ಕಾ) ಕರೆತರುತ್ತಾನೆ. ಆಗ ನಡೆಯೋ ಕಾಳಗದಲ್ಲಿ ಶಿವುಡು (ಪ್ರಭಾಸ್) ಮಾಹಿಷ್ಮತಿಯ ಯುವರಾಜನ ತಲೆಯನ್ನು ಕಡಿದಾಕುತ್ತಾನೆ. ತದನಂತರ ಕಟ್ಟಪ್ಪ  (ಸತ್ಯರಾಜ್) ಶಿವುಡುವನ್ನು (ಪ್ರಭಾಸ್) ಗುರುತಿಸಿ, ಹಿಂದಿನ ಕಥೆಯನ್ನ ಆತನಿಗೆ ಹೇಳುತ್ತಾನೆ.
.
.
ಅಮರೇಂದ್ರ ಬಾಹುಬಲಿ (ಪ್ರಭಾಸ್), ಶಿವುಡುವಿನ ತಂದೆ ಮತ್ತು ಬಲ್ಲಾಳದೇವ (ರಾಣಾ ದುಗ್ಗಬಾಟಿ) ಇಬ್ಬರೂ ಸಹ ತಮ್ಮ ಶೌರ್ಯ ಸಾಹಸಗಳಿಂದ, #ಕಾಲಕೇಯನೆಂಬ (ಪ್ರಭಾಕರ್) ದೈತ್ಯನೆದುರು ಯುದ್ಧದಲ್ಲಿ ಜಯಿಸಿಸುತ್ತಾರೆ.
.
.
ಆದರೆ, ರಾಜಮಾತೆ ಶಿವಗಾಮಿ (ರಮ್ಯಕೃಷ್ಣ) "ನೂರು ಶತ್ರುಗಳನ್ನು ಕೊಂದವನು ವೀರನೆನಿಸಿಕೊಳ್ಳುತ್ತಾನೆ. ಆದರೆ ಒಂದೇ ಒಂದು ಪ್ರಜೆಯ ಜೀವವನ್ನು ಉಳಿಸಿದವನು ರಾಜನೆನಿಸಿಕೊಳ್ಳುತ್ತಾನೆ" ಎಂದೇಳಿ, ಬಲ್ಲಾಳದೇವನನ್ನು (ರಾಣಾ ದುಗ್ಗಬಾಟಿ)  ಸಾಮ್ರಾಜ್ಯದ ಸೇನಾಪತಿಯನ್ನಾಗಿ ಅರಿಸಿ, ಅಮರೇಂದ್ರ ಬಾಹುಬಲಿ (ಪ್ರಭಾಸ್)ಯನ್ನು ಮಾಹಿಷ್ಮತಿ ಸಾಮ್ರಜ್ಯದ ಸಿಂಹಾಸನಕ್ಕೆ ಅಧಿಪತಿಯನ್ನಾಗಿ ಆರಿಸುತ್ತಾಳೆ. ಅದೂ, ಬಲ್ಲಾಳದೇವನು (ರಾಣಾ ದುಗ್ಗಬಾಟಿ) ತನ್ನ ಸ್ವಂತ ಮಗನಾಗಿದ್ದಾಗಿಯೂ ಸಹ.

ಕಾರಣ ಏನೋ ಎತ್ತೋ ಗೊತ್ತಿಲ್ಲಾ, ಆದರೆ, ಅಮರೇಂದ್ರ ಬಾಹುಬಲಿಯ (ಪ್ರಭಾಸ್) ಕೊಲೆಯಾಗಿ, ಆತನ ಮಗುವನ್ನು ಈ ರಾಜಮಾತೆ ಶಿವಗಾಮಿ (ರಮ್ಯಕೃಷ್ಣ)  ಕಾಪಾಡುತ್ತಾಳೆ.
.
.
ಈ ಬಾಹುಬಲಿ ಸಿನೆಮಾದ ಮೊದಲ ಭಾಗದ ನಿಜವಾದ ಹೀರೋ ಅಂದ್ರೇ ಅದು ಬಲ್ಲಾಳದೇವನೇ (ರಾಣಾ ದುಗ್ಗಬಾಟಿ) ಸರಿ. ಆ ಪಾತ್ರದ ದರ್ಪ, ಕುತಂತ್ರ, ಅಹಂಕಾರ, ದಮ್ಮು, ವೈಭೋಗ ನಿಜಕ್ಕೂ ದುರ್ಯೋಧನನ್ನ ನೆನಪಿಗೆ ತರುತ್ತೆ. ಅಂತಾ ಧುರ್ಯೋಧನ ಪಾತ್ರದ ವ್ಯಕ್ತಿಗೆ, ಧೃತರಾಷ್ಟ್ರನಂತಾ ಅಪ್ಪಾ ಬಿಜ್ಜಳದೇವ (ನಾಸಿರ್) ಡಿಟ್ಟೋ  ಧೃತರಾಷ್ಟ್ರನ ತರವೇ ಪುತ್ರಪ್ರೇಮಿ!!!
.
.
ಆ ಪಾತ್ರ ಪೋಷಣೆಗೆ, ರಾಣ ಪಟ್ಟಿರುವ ಶ್ರಮ ಸಿನ್ಮಾದಲ್ಲಿ ಎದ್ದು ಕಾಣುತ್ತೆ. ಯುದ್ಧ ಸನ್ನಿವೇಶ, ಅಲ್ಲಿ ಆತನ ಅಬ್ಬರ, ಪರಾಕ್ರಮ, ಆತ ಬಳಸಿರೋ ಆಯುಧಗಳು, ನಿಜಕ್ಕೂ ಸೂಪರ್ರ್! ಇಂತಾ ದುರ್ಯೋಧನಂತಾ ಪಾತ್ರಧಾರಿಗೆ, ಅಲ್ಲಿ ಸಿಕ್ಕಿರೋ ಆಯುಧ ಗದೆ! ಅದೂ, ಗದೆಯ ಹಿಡಿಯೊಳಗೆ ಸರಪಳಿಯನ್ನಾಕಿ, ಆ ಸರಪಳಿಗೆ ಗದೆಯ ಮುಂದಿನ ಭಾಗವನ್ನ ಜೋಡಿಸಿ, ಅದನ್ನ ಬಳಸೋ ಶೈಲಿ ನಿಜಕ್ಕೂ ಅದ್ಭುತ.
.
.
ಬಾಹುಬಲಿ ಸಿನ್ಮಾ, ಐತಿಹಾಸಿಕ ಕಥೆಯುಳ್ಳ ಸಿನೆಮವೂ ಅಲ್ಲಾ ಅಥವಾ ಪೌರಾಣಿಕ ಕಥೆಯುಳ್ಳ ಸಿನೆಮಾವೂ ಅಲ್ಲಾ, ಅದೊಂದು ಕಾಲ್ಪನಿಕ ಕಥೆಯಷ್ಟೇ. ಮತ್ತೆ ಈ ಸಿನೆಮಾಕ್ಕೂ, ನಮ್ಮ್ ಅಣ್ಣೋರ ಮಯೂರ ಸಿನೆಮಾಕ್ಕೂ ಸಹ ಯಾವುದೇ ಸಂಬಂಧ ಇಲ್ಲಾ, ಮೊದಲಿಗೆ ರಾಜಮಾತೆ ಶಿವಗಾಮಿ (ರಮ್ಯಕೃಷ್ಣ) ಮಗುವನ್ನ ರಕ್ಷಿಸುವ ಸೀನೊಂದನ್ನೊರತುಪಡಿಸಿ.
.
.
ಅಮರೇಂದ್ರ ಬಾಹುಬಲಿ (ಪ್ರಭಾಸ್)  ಹಾಗೂ ಬಲ್ಲಾಳದೇವ (ರಾಣಾ ದುಗ್ಗಬಾಟಿ) ಎಂಬ ಎರಡು ಪ್ರಮುಖ ಪಾತ್ರಗಳ ನಡುವೆ ಸಿಂಹಾಸನಕ್ಕಾಗಿ ನಡೆಯುವ ಜಿದ್ದಾಜಿದ್ದಿ , ಮತ್ತದಕ್ಕೆ ಸಂಬಂಧಿತ ಘಟನೆಗಳ ಸಮಗ್ರ ಮಿಶ್ರಣವೇ " ಬಾಹುಬಲಿ" ಯ ಕಥಾವಸ್ತು.
.
.
ಅಷ್ಟು ದೊಡ್ಡ ಶಿವಲಿಂಗವನ್ನ ಒಬ್ಬನೇ ಎತ್ತಿಕೊಂಡು, ಜಲಪಾತದಲ್ಲಿ ನೀರು ಬೀಳುವ ಜಾಗಕ್ಕೆ ಆ ಶಿವಲಿಂಗವನ್ನ ಇಡುವ ಸಾಹಸಿ ಆ ಶಿವುಡು  (ಪ್ರಭಾಸ್),

ನೂರಾರು ಅಡಿ ಎತ್ತರದ ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಚಿನ್ನದ ಪ್ರತಿಮೆಯನ್ನು, ಹಿಡಿದುಕೊಳ್ಳಲಾಗದೇ, ಅದಕ್ಕೆ ಕಟ್ಟಿದ್ದ ಹಗ್ಗವನ್ನ ಎಲ್ಲರೂ ಬಿಟ್ಟ ನಂತರವೂ ಸಹ, ಒಬ್ಬನೇ ಆ ಹಗ್ಗವನ್ನ ಹಿಡಿದು, ಜನರಮೇಲೆ ಬೀಳುತ್ತಿದ್ದ ಆ ಪ್ರತಿಮೆಯನ್ನ ಹಿಡಿದು ನಿಲ್ಲಿಸುವ ಸಾಹಸಿ ಶಿವುಡು  (ಪ್ರಭಾಸ್),

ಸೈನಿಕರಿಂದ ಸುತ್ತುವರೆದ, ಒಳ್ಳೇ ಕಾವಲುಗಾರರನ್ನೊಂದಿರುವ ಕೋಟೆಯನ್ನು ಸುಲಭವಾಗಿ ಹತ್ತುವ ಸಾಹಸಿ ಶಿವುಡು  (ಪ್ರಭಾಸ್).

ಇವು ನೋಡುಗರಿಗೆ ಅತಿರೇಕವೆನಿಸಿದರೂ, ತೆಲುಗಿನ ಬಹುತೇಕ ಸಿನೆಮಾಗಳಲ್ಲಿ ಇದು ಕಾಮನ್ ವಿಷ್ಯ. ಹಾಗಾಗಿ, ಯಾವುದೇ ಲಾಜಿಕ್ಕು, ಮ್ಯಾಜಿಕ್ಕಿನ ಬಗ್ಗೆ ಯೋಚಿಸದೇ ಇಂತಾ ದೃಶ್ಯಗಳನ್ನ ನೋಡಿದರೆ ಓಕೆ, ಇಲ್ಲಾಂದ್ರೆ ನೀವ್ ಸುಖಾಸುಮ್ಮನೇ ತಲೆ ಕೆಡುಸ್ಕೊಬೇಕಾಯ್ತದೆ ಅಷ್ಟೇ.
.
.
ರಾಜಮಾತೆ ಶಿವಗಾಮಿಯ (ರಮ್ಯಕೃಷ್ಣ) ಗತ್ತು, ಗಮ್ಮತ್ತು ನಿಜಕ್ಕೂ ಸೂಪ್ಪರ್!

ಸೇನಾಪತಿ ಕಟ್ಟಪ್ಪನ (ಸತ್ಯರಾಜ್)  ಆರ್ಭಟ, ಪರಾಕ್ರಮವನ್ನ ನೋಡಿದಾಗ, ಮೊದಲ ಭಾಗದ ಈ ಸಿನೆಮಾಕ್ಕೆ ಬಾಹುಬಲಿ ಎಂಬ ಹೆಸರಿನ ಬದಲಿಗೆ ಕಟ್ಟಪ್ಪ ಅಂತಿಟ್ಟದ್ದರೇ ಇನ್ನೂ ಸೊಗಸಾಗಿರುತ್ತಿತ್ತೇನೋ ಅನ್ಸುತ್ತೆ, ಅಷ್ಟರ ಮಟ್ಟಿಗೆ ಸತ್ಯರಾಜ್ ಪಾತ್ರ ಪೋಷಣೆ ಮಾಡಿದ್ದಾರೆ.


ಕಾಲಕೇಯನ (ಪ್ರಭಾಕರ್)  ಪಾತ್ರಧಾರಿಯ ಭಯಂಕರ ರೂಪ, ಅವರಾಡುವ ಭಾಷೆ, ಆತನ ರುದ್ರಾವತಾರ, ನಿಜಕ್ಕೂ ಅದ್ಭುತ ಅನ್ನುವಷ್ಟರ ಮಟ್ಟಿಗೆ ಮೂಡಿ ಬಂದಿದೆ.


ಪರ್ಷಿಯನ್ ಶಸ್ತ್ರಾಸ್ತ್ರ ಪೂರೈಕೆದಾರ (#ಅಸ್ಲಂಖಾನ್ (ಸುದೀಪ್) ಪಾತ್ರದಲ್ಲಿನ ಸುದೀಪ್, ಒಂದೆರಡು ನಿಮಿಷಕ್ಕೆ ಮಾತ್ರ ಈ ಚಿತ್ರದಲ್ಲಿ ಸೀಮಿತ.


ಇಂಟರ್‌ವೆಲ್ ನಂತರ ನಡಿಯೋ ಯುದ್ಧದ ಸನ್ನಿವೇಶ ಮಾತ್ರ ನಿಜಕ್ಕೂ ಅದ್ಭುತವಾಗಿದೆ.


ಬಾಹುಬಲಿ ಚಿತ್ರಕ್ಕೆ ಸದ್ಯಕ್ಕೆ ಕ್ಲೈಮ್ಯಾಕ್ಸ್ ಇಲ್ಲಾ, ಜಸ್ಟ್ ಇಂಟರ್‌ವೆಲ್. ಸಿನ್ಮಾಸ್ ಕ್ಲೈಮ್ಯಾಕ್ಸ್ ಏನ್ ಅಂತಾ ತಿಳಿಬೇಕಾದ್ರೆ, ಬಾಹುಬಲಿ - ಭಾಗ ಎರಡನ್ನ ನೋಡ್ಬೇಕು!!!








Saturday, May 16, 2015

ಕೇಸರಿ ಪಕ್ಷದ ಜಯಭೇರಿ (16 ಮೇ 2014) - ನರೆಂದ್ರ ಮೋದಿ ಗೆದ್ದು ಒಂದು ವರ್ಷ ಇಂದಿಗೆ


ಈಗ್ಗೇ ಒಂದು ವರ್ಷದ ಕೆಳಗೆ (16 ಮೇ 2014), ಇದೇ ದಿನ ನಾವ್ ಬಹು ಕಾತರದಿಂದ ನಿರೀಕ್ಷಿಸುತ್ತಿದ್ದ ದಿನ, ನಮ್ಮ ಕಲ್ಪನೆಗೂ ಮೀರಿದ ದಿಗ್ವಿಜಯ ಸಾಧಿಸಾಯ್ತು.
.
.
ಮಾರನೇ ದಿನ ಬೆಳಿಗ್ಗೆ, ಪೇಪರ್ ಮಾರೋ ಅಂಗಡಿಗೆ ಹೋದವನೇ, ಆ ಅಂಗಡಿಯಲ್ಲಿದ್ದಾ ಎಲ್ಲಾ ಪೇಪರ್‌ಗಳ ಒಂದೊಂದು ಪ್ರತಿಯನ್ನ ತಂದಿಟ್ಕಂಡ್, ಎಲ್ಲವನ್ನೂ ಓದ್ತಾ ಖುಷಿ ಪಟ್ಟೆ.
.
.
ಆ ಎಲ್ಲಾ ಪತ್ರಿಕೆಗಳನ್ನ ಜೋಪಾನವಾಗಿ ಎತ್ತಿಟ್ಟಿದ್ದೇ ಕೂಡ. ಇವತ್ತ್ ಬೆಳಿಗ್ಗೆ ಆ ವಿಜಯದ ದಿನ ನೆನಪಾಗಿ, ಆ ಪತ್ರಿಕೆಗಳ ಪೋಟೋ ತಗಂಡ್ ಇಲ್ಲಾಕಿದೀನಿ.
.
.
.
ಮತ್ತ್ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತಾಡ್ತಾ ಕಾಲ್ ಎಳಿಯೋ ಅವಶ್ಯಕತೆ ಇಲ್ಲಾ ಇಲ್ಲಿ. ವೋಚ್ಚ್ ಅಲಗ್, ಯೇಚ್ಚ್ ಅಲಗ್.
.
.
ಖುಷಿ ಪಡೋ ವಿಷ್ಯಕ್ಕ್ ಖುಷಿ ಪಡಣ, ಕಾಲ್ ಎಳಿಯೋ ವಿಷ್ಯಕ್ಕ್ ಕಾಲೂ ಮತ್ತ್ "ಕೈ"ಯೂ ಎಳಿಯೋಣ

.













Saturday, December 20, 2014

ಕ್ಯಾ PK ಆಯೇ ಕ್ಯಾ?

ಕ್ಯಾ PK ಆಯೇ ಕ್ಯಾ? (ಅಮೀರ್ ಖಾನ್ ಚಿತ್ರ PK ಬಗ್ಗೆ ನನಗನ್ನಿಸಿದ್ದು, ಚಿತ್ರವನ್ನ ಥಿಯೇಟರ್’ನಲ್ಲಿ ನೋಡಿದ ಮ್ಯಾಗೆ)
-----------------------------------------------------------------------------------------------

ಕಥೆ ಡಿಫರೆಂಟಾಗಿರೋ ಸಿನ್ಮಾ PK, ಆ ಕಥೆನಾ ಸಿನ್ಮಾದಲ್ಲಿ ಹೇಳಿರೋ ರೀತೀ ಕೂಡ ಡಿಫರೆಂಟೇ! ಇದೊಂತರ ಕಾಮಿಡಿ ಮಿಶ್ರಿತ, ಮನಸ್ಸಿಗೆ ಮುದ ನೀಡೋ ಸಿನ್ಮಾ. ಕೊಟ್ಟ ಕಾಸಿಗೆ ಲಾಸಿಲ್ಲದ್ದು. ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಇಬ್ರೂ ಸಹ ಹೀರೋ ಈ ಸಿನೆಮಾಕ್ಕೆ, ಒಬ್ಬ ತೆರೆಯ ಮುಂದೆ, ಮತ್ತೊಬ್ಬ ತೆರೆಯ ಹಿಂದೆ


ನಾವು ಇತ್ತೀಚೆಗೆ ಬೇರೆ ಗ್ರಹಗಳಲ್ಲಿ ಜೀವಿಗಳಿದಾವ ಅಂತಾ ಸಂಶೋಧನೆ ಮ್ಯಾಗ್ ಸಂಶೋಧನೆ ಮಾಡ್ತಾನೆ ಇದೀವಿ. ಹಾಗಾಗಿ, ಚಂದ್ರನ ಮ್ಯಾಗೆ, ಮಂಗಳನ ಮ್ಯಾಗೆ ನಮ್ಮ ಹೆಜ್ಜೆಗುರುತುಗಳನ್ನ ಮೂಡ್ಸಕ್ಕ್ ನೋಡ್ತಾನೇ ಇದೀವಿ. ಅಂಗೇ ಬೇರೇ ಗ್ರಹದಲ್ಲಿರುವ ಜೀವಿಗಳೆನಾದ್ರೂ, ನಮ್ಮ ಭೂಮಿ ಮ್ಯಾಗೂ ಬಂದ್ರೇ? ಹೆಂಗಿದ್ದರಬೋದು ಅನ್ನೋದು ಒನ್‍ಲೈನ್ ಸ್ಟೋರಿ.
.
.
ಬೇರೆ ಗ್ರಹದ, ಮನುಷ್ಯರ ತರಾನೇ ದೇಹಾಕಾರವಿರುವ, ಆದ್ರೆ ನಮ್ಮ ಹಾಗೇ ಮಾತನಾಡದ ಮತ್ತೆ ಬಟ್ಟೆಯೆಂದರೆನೆಂದು ಗೊತ್ತಿಲ್ಲದ ಅನ್ಯಗ್ರಹದ ಜೀವಿಯೊಂದು ರಾಜಸ್ಥಾನದಲ್ಲಿ ತನ್ನ ಹಾರುವ ತಟ್ಟೆಯಿಂದಿಳಿದು ಬಂದು ತನ್ನ ಹಾಗೂ ತನ್ನ ಗ್ರಹಕ್ಕೆ ಕನೆಕ್ಷನ್ ಮಾಡೋ ಲಾಕೆಟ್ಟನ್ನ ಕಳೆದುಕೊಳ್ಳುತ್ತೆ. ಆದು / ಆತ ಲಾಕೆಟ್ ಕಳೆದುಕೊಂಡಾಗ ಆ ಜೀವಿಗೆ ಸಿಗೋದೇ "PKಯ ಮುಂದಿನ ಭಾಗವನ್ನ ಮುಚ್ಚೋ ಟೇಪ್ ರೆಕಾರ್ಡರ್". ಲಾಕೆಟ್ಟಿಲ್ಲದೇ ಆ ಜೀವಿ ತನ್ನ ಗ್ರಹಕ್ಕೆ ಮತ್ತ್ ವಾಪಸ್ ಹೋಗೋಕ್ಕ್ ಆಗಲ್ಲ.
.
.
ಆ ಲಾಕೆಟ್ಟನ್ನ ಹುಡೂಕೋ ಪ್ರಯತ್ನದಲ್ಲಿ ಹೋಗೋ ಆ ಜೀವಿಗೆ ಈ ಭೂಮಿ ಮ್ಯಾಗಿನ ಜನರ ವೇಷ ಭೂಷಣ, ಆಚಾರ ವಿಚಾರಗಳು ವಿಚಿತ್ರ ಅನ್ಸುತ್ವೆ. ನಮ್ಮಲ್ಲಿನ ಕೆಲವರು ನಿನ್ನ್ ಲಾಕೆಟ್ಟನ್ನ ದ್ವ್ಯಾವ್ರು ಮಾತ್ರ ಹುಡ್ಕಕ್ಕ್ ಸಾಧ್ಯ ಅಂದಾಗ, ಈತ ಎಲ್ಲಾ ಧರ್ಮದ ದೇವರುಗಳನ್ನ ಬೇಡ್ಕೊಳ್ತಾನೆ ಮತ್ತ್ ತನ್ನ ಲಕೆಟ್ ಸಿಗದಿದ್ದಾಗ "ದೇವರು ಕಾಣೆಯಾಗಿದ್ದಾನೆ, ಹುಡುಕಿಕೊಡಿ ಅಂತಾ Pamphlet ಮಾಡಿ ಕೂಡ ಹಂಚ್ತಾನೆ. ಯಾರೂ ಈತನ ಲಾಕೆಟ್ಟನ್ನ ಹುಡುಕೋಕ್ಕೆ ಸಹಾಯ ಮಾಡಲ್ಲ.
.
.
ಈ ತರಃ, ವಿಚಿತ್ರವಾಗಿ ವರ್ತಿಸೋ ಈತನನ್ನ ಜನ, ಪೊಲೀಸು ಏನಾದ್ರೂ ಕೇಳಕ್ಕ್ ಬಂದಾಗ್ "PK ಆಯೇ ಕ್ಯಾ" ಅಂತಿರ‍್ತಾರೆ. ಅಂಗಾಗಿ, "PK ಆಯೇ ಕ್ಯಾ" ಅಂದ್ರೇನು ಅಂತಾ ಗೊತ್ತಿಲ್ಲದ ಈತನಿಗೆ PK ಅನ್ನೋದೇ ಖಾಯಂ ಹೆಸರಾಗೋಗುತ್ತೆ.
.
.
ದೂರದ ಬೆಲ್ಜಿಯಂನಲ್ಲಿ ಅಮಿತಾಬ್‍ ಬಚ್ಚನ್‍ನ ಇಬ್ರು Fanಗಳು, ಅಮಿತಾಬ್‍ದು ಶೋ ನೋಡಕ್ಕ್ ಟಿಕೇಟ್ ಸಿಗದೇ ಭೇಟಿಯಾಗ್ತಾರೆ. ಅದ್ರಲ್ಲಿ ಆಕೆ ಭಾರತೀಯ ಹಿಂದೂ ಹುಡ್ಗಿ ಜಗ್ಗು, ಆಕೆ ಜರ್ನಲಿಸಂ ವಿಧ್ಯಾರ್ಥಿ, ಮತ್ತ್ ಪಾಕಿಸ್ತಾನಿ ಸಾಬರ ಹುಡ್ಗ ಸರ್ಫರಾಜ್, ಆತ ಒಳ್ಳೇ ಹಾಡುಗಾರ ಮತ್ತು ಬೆಲ್ಜಿಯಂನಲ್ಲಿನ ಪಾಕಿಸ್ತಾನದ Embassyನಲ್ಲಿ ಪಾರ್ಟ್ ಟೈಂ ಕೆಲ್ಸ ಮಾಡ್ತಿರ‍್ತಾನೆ (ಆದ್ರೆ, ಈತ ಹೀರೋ PK ಅಂತೂ ಅಲ್ಲ). ಇವ್ರಿಬ್ಬರಿಗೂ ಹರಿವಂಶ್‍ರಾಯ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಮ್ಯಾಗಿನ ಒಂದು ಸಮಾನ ಭಾವ ಮತ್ತು ಬಾಂಧವ್ಯದಿಂದ ಪ್ರೀತಿ, ಪ್ರೇಮ, ಪ್ರಣಯ ಎಲ್ಲವೂ ಹುಟ್ಟುತ್ತೆ. ಇಬ್ರೂ ಮದ್ವೆ ಆಗೋಣ ಅಂದ್ಕಂತಾರೆ, ಆದ್ರೆ ಹುಡ್ಗಿ ಮನೆಯಾಗ್ ಒಪ್ಪಲ್ಲ ಇದಕ್ಕೆ, ಕಾರಣ, ಹುಡ್ಗ ಪಾಕಿಸ್ತಾನಿ, ನಂಬಿಕೆಗೆ ಅರ್ಹನಲ್ಲದವನು ಮತ್ತು ಆತ ಹಿಂದೂವಲ್ಲ ಅನ್ನೋದು. ಆದರೂ, ಆಕೆ ಅದೇ ಹುಡಗನ್ನ ಮದ್ವೆ ಆಗೋದು ಅಂತಾ ತೀರ್ಮಾನಿಸಿ ಆ ಇಬ್ಬರೂ ಪ್ರೇಮಿಗಳು ಅದೇ ಬೆಲ್ಜಿಯಂನಲ್ಲಿ ಮದ್ವೆ ಆಗೋ ಟೇಮ್ ಬಂದಾಗ, ಅಲ್ಲಿ ಹುಡ್ಗಿ ಜಗ್ಗುಗ್ ಒಂದ್ ಪತ್ರ ಬರುತ್ತೆ "I'm Sorry, I can't Marry U" ಅಂತಾ. ಇದರಿಂದ ಬೇಜಾರಾದ ಹುಡ್ಗಿ ಜಗ್ಗು, ಆ ಪ್ರೇಮಕ್ಕ್ ಎಳ್ಳೂ ನೀರ್ ಬಿಟ್ಟು ವಾಪಸ್ ದೆಹಲಿಗ್ ಬರ‍್ತಾಳೆ ಮತ್ತು ಅಲ್ಲಿ ಒಂದ್ TV ಚಾನಲ್‍ನಲ್ಲಿ ಕೆಲ್ಸಕ್ಕ್ ಸೇರ‍್ತಾಳೆ.
.
.
ತದನಂತರವೇ ಆಕೆಗೆ PKಯ ಪರಿಚಯವಾಗೋದು. ನಾನು ಮುಂಚೆ ಕೇಳಿದ್ದ, ನೆಟ್‍ನಲ್ಲಿ ಓದಿದ್ದ "ಡ್ಯಾನ್ಸಿಂಗ್ ಕಾರ್" ಅರ್ಥಾತ್ ಕಾರ್ ಒಳಗೇ ಖಲ್ಲಂಖುಲ್ಲಂ ಬಟ್ಟೆಬಿಚ್ಚಿ ಸೆಕ್ಸ್ ಮಾಡೋ ಜನರನ್ನ ಇಲ್ಲಿ ಪಸಂದಾಗ್ ತೋರ‍್ಸವ್ರೆ.
.
.
ಡಿಪರೆಂಟ್ ಡ್ರೆಸ್ಸಿನ, ಯಾವುದೋ ಗ್ರಹದ ಜೀವಿಗಳ ತರ ಇರೋ ಕಣ್ಣು ಮತ್ತು ಕಿವಿಯ, ಕೆಂದುಟಿಯ, ಭೋಜ್‍ಪುರಿ ಭಾಷೆ ಮಾತಾಡುವ PK ಇಲ್ಲಿ ಇಷ್ಟವಾಗ್ತಾನೆ.
.
.
ಚಿತ್ರವಿಚಿತ್ರವಾಗಿ ಆಡೋ ಈ PK, ಪತ್ರಕರ್ತೆ ಜಗ್ಗುಗೆ ಇಷ್ಟವಾಗ್ತಾನೆ. ಈತನ ಕಥೆ ಕೆಳಿದ ಜಗ್ಗು, ಆತನ ಲಾಕೆಟ್ಟನ್ನ ಮತ್ತೆ ವಾಪಸ್ ಪಡೆಯೋಕ್ಕೆ ಈತನಿಗೆ ಸಹಾಯ ಮಾಡೋಕ್ಕ್ ಶುರು ಮಾಡ್ತಾಳೆ. ಈ PKಯ ಲಾಕೆಟ್ಟನ್ನ ಅಂದು ಲಪಟಾಯಿಸಿದ ವ್ಯಕ್ತಿ, ಅದನ್ನ ಓರ್ವ ದೇವಮಾನವನಿಗೆ ಮಾರ‍್ಬಿಟ್ಟಿರ‍್ತಾನೆ. ಆ ಲಾಕೆಟ್ಟನ್ನ PK ಮತ್ತ್ ಜಗ್ಗು ಸೇರ‍್ಕಂಡ್ ಎಂಗ್ ಪಡಿತಾರೇ ಅನ್ನೋದೆ ಮುಂದಿನ ಸಿನ್ಮಾ.
.
.
ಧರ್ಮಸೂಕ್ಷ್ಮ ವಿಷಯವನ್ನ ಈ ಸಿನೆಮಾದಲಿ ನಿಭಾಯಿಸಿರೋ ರೀತಿ ಬಲು ಅನನ್ಯವಾದದ್ದು.

ಪ್ರತಿ ಧರ್ಮದಲ್ಲಿನ ನಂಬಿಕೆ, ಕಂದಾಚಾರಗಳನ್ನ ತನ್ನ ಮುಗ್ಧತೆಯಿಂದಲೇ ತಿಳಿದುಕೊಳ್ಳೋ PK, ಅಲ್ಲೆಲ್ಲಾ ಪ್ರತಿಕ್ರಿಯಿಸೋ ರೀತಿ ಅದ್ಭುತವಾಗಿದೆ. ದೇವಮಾನವರ ಹುಳುಕುಗಳು, ನಮ್ಮ ಜನರ ಅಳುಕುಗಳು ಇಂತಾ ವಿಷ್ಯಗಳ ಬಗ್ಗೆ ತನ್ನದೇ ರೀತಿಯಲ್ಲಿ ಪ್ರಶ್ನೆಗಳನ್ನ ಕೇಳುತ್ತಾ ಆ ದೇವಮಾನವರನ್ನ ಬೆತ್ತಲೆ ಮಾಡೋ ರೀತಿ ತುಂಬಾ ಚೆನ್ನಾಗಿ ಮೂಡಿಬಂದಿದೆ. "O My God" ಚಿತ್ರದ ಎಳೆ ಇಲ್ಲಿ ಚೂರ್ ಕಂಡ್ರೂ, ಇದು ತನ್ನದೇ ರೀತಿಯಲ್ಲಿ ಬೇರೆ ತರ ಇರೋ ಸಿನ್ಮಾ.
.
.
ಕೆಲವೊಂದನ್ನ ನಾವ್ Different ಆಗ್ ನೋಡುದ್ರೆ ಪ್ರಂಪಂಚ ಎಂಗಿರುತ್ತೆ ಅಂತಾ ಯೋಚ್ನೆಗಚ್ಚಿಸೋ ಸಿನ್ಮಾ ಇದು.
.
.
ಸಾಮಾನ್ಯ ಜನರು ದೇವರು, ದೇವಮಾನವರ ಬಗ್ಗೆ ಕೇಳಕ್ಕ್ ಇಷ್ಟ ಪಡೋ, ಆದ್ರೆ ಕೇಳಕ್ಕಾಗದ ಪ್ರಶ್ನೆಗಳನ್ನ ಈ PK ಕೇಳ್ತಾ ಹೋಗ್ತಾನೆ ಈ ಸಿನೆಮಾದಲ್ಲಿ.

.
.
ಅಂತೂ ಕೊನೆಗೆ ಆ ದೇವಮಾನವನೊಂದಿಗೆ TVಯಲ್ಲಿ ಮುಖಾಮುಖಿಯಾಗಿ, ದೇವಮಾನವ ಕೇಳೋ ಪ್ರಶ್ನೆಗಳಿಗೆ ತನ್ನದೇ ರೀತಿಯಲ್ಲಿ ಮುಗ್ಧವಾಗಿ ಉತ್ತರಿಸಿ, ಮೋಸ ಮಾಡಿ ಓಡಿ ಹೋಗಿದ್ದ ಅಂತಾ ನಂಬಿಕೊಂಡಿದ್ದ ಪತ್ರಕರ್ತೆ ಜಗ್ಗುವಿನ ಪಾಕಿಸ್ತಾನಿ ಪ್ರೇಮಿಯನ್ನ ಆಕೆಯೊಂದಿಗೆ ಸೇರಿಸಿ, ತನ್ನ ಮನದೊಳಗಿದ್ದ ಜಗ್ಗುವಿನ ಮೇಲೆ ಉಂಟಾಗಿದ್ದ ಪ್ರೀತಿಯನ್ನ ಹೇಳಿಕೊಳ್ಳಲಾಗದೇ, ತನ್ನ ಲಾಕೆಟ್ಟನ್ನ ಮಡೆದು, ಮರಳಿ ತನ್ನ ಗ್ರಹಕ್ಕೆ PK ಹೊಂಟೋಗ್ತಾನೆ.

.
.
ನಿಮಗೆ ಸಿನೆಮಾ ಇಷ್ಟವಾಗುತ್ತೆ, ಆಪ್ತ ಅನ್ಸುತ್ತೆ, ಒಂದ್ಸಲ ನೋಡಬಹುದಾದ ಸಿನ್ಮಾ ಇದು. ನಾನಂತೂ ಮತ್ತೊಂದ್ಸಲ ಹೋಗೋ ತಯಾರಿಯಲ್ಲಿದ್ದೇನೆ.
.
.
(ಜನ ತಮ್ಮ್ ಪರ್ಸ್ ಕಳಕೊಂಡ್ರೆ, ಅದ್ಯಾರಿಗಾದ್ರೂ ಸಿಕ್ಕಿ ಇದು ನಿಮ್ದಾ ಅಂದಾಗ “ಎಲ್ರೂ ಆಂ ನಮ್ದೇ ನಮ್ದೇ ನಮ್ದೇ” ಅಂತಾ ಓಡಿ ಬರ್ತಾರೆ. ಆದ್ರೆ ಅದೇ ಜನರಲ್ಲಿ ಯಾರಾದ್ರೂ ಒಬ್ರ ಪ್ಯಾಕೆಟ್ಟಿಂದ ಕಾಂಡೋಂ ಬೀಳಿಸಿಕೊಂಡು, ಅದ್ಯಾರಿಗಾದ್ರೂ ಸಿಕ್ಕಿ, ಇದು ನಿಮ್ದಾ ಅಂದ್ರೆ ಮಾತ್ರ “ಯಾರೂ ಒಪ್ಕಳಲ್ಲ”. ಯಾಕೇ?)
ಹೆಹೆಹೆಹೆಹೆಹೆಹೆಹೆಹೆಹೆಹೆಹೆ


Tuesday, December 16, 2014

ರಜನಿಕಾಂತನ ಲಿಂಗ ಚಿತ್ರದ ವಿಮರ್ಶೆ

ರಜನಿಕಾಂತನ ಲಿಂಗ ಮತ್ತು ಅದರ ಪ್ರಭಾವ - ಏನೋ ನಾ ನೋಡ್ ಅರ್ಥಮಾಡ್ಕಂಡಷ್ಟನ್ನ ಇಲ್ಲಿ ಬರಿತಾ ಇದೇನೆ.
...............................................

ಕನ್ನಡ ಮೂಲದ ಹೀರೋ, ಹೀರೋಹಿನ್, ನಿರ್ಮಾಪಕ, ಕನ್ನಡದ ನೆಲ, ಮೈಸೂರ್ ಅರಮನೆ, ಲಿಂಗನಮಕ್ಕಿ ಡ್ಯಾಮ್ - ಕನ್ನಡ ಭಾಷೆಯೊಂದನ್ನು ಬಿಟ್ಟು ಬಹುತೇಕ ಎಲ್ಲವೂ ಕನ್ನಡಮಯವೇ ರಜನಿಕಾಂತ್ ಅಭಿನಯದ ಲಿಂಗ ಚಿತ್ರದಲ್ಲಿ.


ಸೀನಿಯರ್ ಲಿಂಗನ ಕಥೆ:

1939ರ ಕಾಲಘಟ್ಟದಲ್ಲಿ ರಾಜಮನೆತನದ "ಲಿಂಗೇಶ್ವರ" ಅವ್ರಪ್ಪನ ಇಚ್ಚೆಯಂತೆ ಆಗಿನ ಕಾಲದ ICS ಪಾಸ್ ಮಾಡಿ, ಜೊತೆಗೆ ಸಿವಿಲ್ ಇಂಗಿನಿಯರಿಂಗ್‍ನಲ್ಲಿ ಪದವಿ ಪಡ್ಕಂಡೂ, ಬ್ರಿಟೀಷ್ ಸರ್ಕಾರದಲ್ಲಿ ಕಲೆಕ್ಟರ್ ಆಗಿ ಸಿಂಗನೂರು ಎಂಬ ಪ್ರದೇಶಕ್ಕೆ ಬರ್ತಾನೆ. 


ಆ ಊರಿನಲ್ಲಿ ನೀರಿಲ್ಲದೇ, ಹಸಿವಿನಿಂದ ಜನ ಆತ್ಮಹತ್ಯೆ ಮಾಡಿಕೊಳ್ಳೋದು ಸರ್ವೇ ಸಾಮಾನ್ಯ ವಿಷ್ಯ (ಇಂದಿಗೂ ರೈತರ ಆತ್ಮಹತ್ಯೆಗೆ ಯಾರ್ ಸರ್ಕಾರಗಳೂ, ಪರಿಹಾರ ಕಂಡಿಡಿದಿಲ್ಲಾ ಅನ್ನೋದ್ ಕೂಡ ಅಷ್ಟೇ ಸತ್ಯ). ಆ ಊರಿನ ಜನ, ತಮ್ಮವನೇ ಆದ ಕಲೆಕ್ಟರ್ ಹತ್ತಿರ ಇಲ್ಲಿನ ನೀರಿನ ಸಮಸ್ಯೆಗೆ ಒಂದ್ ಪರಿಹಾರ ಮಾಡಿ ಅಂದಾಗ, ಆ ಊರಿನ ಸನಸ್ಯೆ ಪರಿಹಾರಕ್ಕೆ ಸಿಂಗನೂರಿನ ನದಿಗೆ ಡ್ಯಾಮ್ ಕಟ್ಟಿ ಆ ಜನರ ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡೋಣ ಅಂತಾ, ಆ ವಿಷ್ಯವನ್ನ ಬ್ರಿಟೀಷ್ ಸರ್ಕಾರಕ್ಕೆ ತಿಳಿಸಿದಾಗ, ಅದರಿಂದ ತಮಗೇನು ಲಾಭ ಅಂತಾ ಯೋಚಿಸೋ ಪರಂಗಿಗಳು, ಡ್ಯಾಮ್ ಕಟ್ಟಕ್ಕಾಗಲ್ಲ ಅಂತಾ ಲಿಂಗೇಶ್ವರನಿಗೆ ಹೇಳ್ತಾರೆ. ತಾನು, ಕಲೆಕ್ಟರಾಗಿಯೂ ಈ ಕೆಲ್ಸವಾಗದ ಮ್ಯಾಗೆ, ಇದ್ಯಾಕ್ ಬೇಕು ಅಂತಾ ಆ ಕೆಲ್ಸಕ್ಕೆ ರಾಜಿನಾಮೇ ಕೊಟ್ಟು, ಅಲ್ಲೇ ಇದ್ದ ಬ್ರಿಟೀಷರಿಗೆ "ನಾನೀ ಡ್ಯಾಮ್ ಕಟ್ಟೇ ತೀರ‍್ತೀನಿ" ಅಂತೇಳಿ ಬರ‍್ತಾನೆ ಲಿಂಗೇಶ್ವರ.


ತನ್ನ ಹುಟ್ಟುಹಬ್ಬದ ಸಮಾರಂಭವನ್ನ ಅಸ್ತ್ರವಾಗಿ ಬಳಸಿಕೊಂಡ ಲಿಂಗೇಶ್ವರ, ಬ್ರಿಟೀಷರಿಂದ ತುಂಬಾ ಚಾಣಾಕ್ಷತನದಿಂದ ಡ್ಯಾಮ್ ಕಟ್ಟಕ್ಕೆ ಅನುಮತಿ ಪಡ್ಕಂಡು ಡ್ಯಾಮ್ ಕಟ್ಟೋ ಕೆಲ್ಸ ಶುರುಮಾಡ್ತಾನೇ. ಅಲ್ಲಿನ ಜನರ ಸಹಕಾರ ಹಾಗೂ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಕೊನೆಗೂ ಛಲಬಿಡದ ತ್ರಿವಿಕ್ರಮನಂತೆ ಅಣೆಕಟ್ಟು ಕಟ್ಟಿಯೇ ಬಿಡುತ್ತಾನೆ. ಹೀರೋ ಇರೋ ಕಡೆಯಲ್ಲ, ವಿಲನ್ನು, ಮತ್ತು ಆ ವಿಲನ್ನಿಗೆ ಸಪೋಟ್ ಮಾಡೋ ಕೆಲ "ನಮಕ್ಕರಾಮ್"ಗಳು ಮಾತ್ರ ಇರಲೇಬೇಕಲ್ವಾ. ಹಾಗೇ, ತನ್ನದೆಲ್ಲವನ್ನೂ ಕಳೆದುಕೊಂಡು ಊರಿನ ಒಳಿತಿಗಾಗಿ ಒಂದ್ ಡ್ಯಾಮ್ ಕಟ್ಟಿ ಜನರ ಬದುಕನ್ನ ಹಸನು ಮಾಡೋ ಲಿಂಗೇಶ್ವರನನ್ನ ಬ್ರಿಟೀಷ್ ಕಡೆಯ ವಿಲನ್ನು, ಮತ್ತು ಆದೇ ಊರಿನ ಒಬ್ಬ "ನಮಕ್ಕರಾಮ್" ಜನರನ್ನ ಎತ್ತಿಕಟ್ಟಿ, ಅವರಿಗೆ ಇಲ್ಲಸಲ್ಲದ್ದನ್ನ ಅವ್ರ ಕಿವಿಗೆ ತುಂಬಿ ಲಿಂಗೇಶ್ವರರನ್ನ ಆ ಊರಿನಿಂದಲೇ ಹೊರಗಾಕುತ್ತಾರೆ. ಈ ಸನ್ನೀವೇಶ ಮಾತ್ರ ಯಾಕೋ ಕಣ್ಣಲ್ಲಿ ನೀರ್ ತರಿಸುತ್ತೆ ಮತ್ತು "ಬಂಗಾರದ ಮನುಷ್ಯನ ರಾಜೀವಪ್ಪ" ಮಾತ್ರ ಬ್ಯಾಡ ಅಂದ್ರೂ ನೆನಪಿಗೆ ಬರೋದ್ ಮಾತ್ರ ತಪ್ಪಲ್ಲ. ಸ್ವತ: ರಾಜನಾಗಿ, ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬೇಕಿದ್ದ ಲಿಂಗೇಶ್ವರ, ಆ ಊರನ್ನ ತೊರೆದು, ಎಲ್ಲೋ ಒಂದ್ ಕಡೆ ಗುಡಿಸಿಲಿನಲ್ಲಿ ನೆಮ್ಮದಿಯಾಗ್ ಬದುಕ್ತಾ ಇರ‍್ತಾನೇ.


ನಮ್ಮ್ ಜನರಿಗೆ ಕೆಟ್ಟ್ ಮ್ಯಾಗೇಯೆ ಬುದ್ಧಿ ಬರದು, ಮತ್ತು ಆವಾಗ್ಲೇ ಸತ್ಯ ಹಾಗೂ ಸುಳ್ಳುಗಳ ನಡುವಿನ ಅಂತ ಗೊತ್ತಾಗೋದು ಅಂತಾರಲ್ಲ ಹಾಗೇ, ಕೊನೆಗೆ ತಮ್ಮ ಹಿತೈಷಿ ರಾಜಾ "ಲಿಂಗೇಶ್ವರ"ನನ್ನ ಹುಡುಕಿಕೊಂಡು ಬರ‍್ತಾರೇ ಮತ್ತು ಬಂದು "ನೀವ್ ನಮ್ಮೂರಿಗ್ ಬನ್ನಿ, ನೀವ್ ಕಟ್ಟಿದ ಆ ದೇವಸ್ಥಾನವನ್ನ ನಾವ್ ನಿಮ್ಮ್ ಮೇಲಿನ ಕೋಪಕ್ಕೆ ಅಂದ್ ಮುಚ್ಚಿದ್ದೇವೇ, ತಾವೇ ಬಂದ್ ಅದನ್ನ ತೆಗೆಯಿರಿ" ಅಂತಾ ಪರಿಪರಿಯಾಗಿ ಕೇಳಿಕೊಂಡರೂ, ಗುಡಿಸಿಲಿನಲ್ಲಿ ವಾಸಿಸುವ ರಾಜ "ಲಿಂಗೇಶ್ವರ" ಮಾತ್ರ ಮತ್ತೆ ಆ ಊರಿಗೆ ಬರಲ್ಲ, ಆದ್ರೇ, ನೀವೆಲ್ಲಾ ಸೆಂದಾಕಿರಿ ಅಂತೇಳಿ ಆ ಜನರನ್ನ ಕಳಿಸಿಕೋಡ್ತಾನೇ. ಲಿಂಗೇಶ್ವರ ಡ್ಯಾಮ್ ಕಟ್ಟೊ ಸಮಯದಲ್ಲೇ, ಆತನನ್ನ ಪ್ರೀತಿಸುತ್ತಿದ್ದ ಅದೇ ಊರಿನ ಹುಡುಗಿಯೊಬ್ಬಳು, ಆತ ಊರನ್ನು ತೊರೆದೋಗುತ್ತಿರೋ ಹೊತ್ತಲ್ಲಿ, ಆತ ತನ್ನ್ ಜೊತೆಗ್ ಬರೋದ್ ಬ್ಯಾಡ ಅಂದ್ರೂ, ಆತನೊಂದಿಗೇ ಹೋಗಿ, ಆತನ ಮಡದಿಯಾಗ್ತಾಳೆ.


ಜ್ಯೂನಿಯರ್ ಲಿಂಗನ ಕಥೆ::
ರೂಪ ಹಾಗೂ ತದ್ರೂಪದಲ್ಲಿ ಸೀನಿಯರ್ರ್ ಲಿಂಗೇಶ್ವರನನ್ನೇ ಹೋಲುವ, ಆದರೆ ವ್ಯಕ್ತಿತ್ವದಲ್ಲಿ ಆತನಿಗೆ ತದ್ವಿರುದ್ಧವಾದ ವ್ಯಕ್ತಿಯೇ, ಕಳ್ಳತನವನ್ನೇ ಜೀವನದ ದಾರಿ ಮಾಡಿಕೊಂಡವ ಈ ಜ್ಯೂನಿಯರ್ ಲಿಂಗೇಶ್ವರ. ಆತನಿಗೆ ತನ್ನ ತಾತಾ ಸೀನಿಯರ್ರ್ ಲಿಂಗೇಶ್ವರನ ಮ್ಯಾಗೆ ಇನ್ನಿಲ್ಲದ ಕೋಪ. ಜನರಿಗಾಗಿ ಎಲ್ಲವನ್ನೂ ಕೊಟ್ಬಿಟ್ಟು, ನಮ್ಮನ್ನ ಬೀದಿಗ್ ತಳ್ಬುಟ್ಟಾ ತಾತ ಅಂತಾ.


ಆದರೆ, ಕಾಲಕ್ರೆಮೇಣ ರಾಜಕೀಯದ ಕಾಂಟ್ರ್ಯಾಕಿಂಗ್ ಮಾಫಿಯಾದೋರು ಆ ಡ್ಯಾಮ್‍ ಹಳೆದಾಗಿದೆ ಅಂತೇಳಿ, ಹೊಸ ಡ್ಯಾಮ್ ಮಾಡುದ್ರೆ, ಸಾವಿರಾರು ಕೋಟಿಗಳ ಕಮೀಷನ್ ಸಿಗುತ್ತೆ ಅಂತಾ, ಚೆನ್ನಾಗಿರೋ ಡ್ಯಾಮ್ ಅನ್ನು ಅನ್‍ಫಿಟ್ ಅಂತಾ ನಿರೂಪಿಸೋಕ್ಕೇ ನೋಡ್ತಾರೆ. ಆದರೆ, ಅದೇ ಊರಿನ ಒಬ್ಬ ತಾತನಿಗೆ, ಏನೋ ಸಂಶಯ ಬಂದು, ಈ ಊರಿನ ಮುಚ್ಚೋಗಿರೋ ದೇವಸ್ಥಾನವನ್ನ ಮತ್ತೆ ರಾಜಮನೆತನವದಿಂದಲೇ ತೆಗೆದಿಸರೆ, ಎಲ್ಲಾ ಕಷ್ಟಗಳು ಪರಿಹಾರವಾಗುತ್ತೆ ಅಂತೇಳಿದಾಗ, ಜ್ಯೂನಿಯರ್ ಲಿಂಗೇಶ್ವರನನ್ನ ಆ ತಾತನ ಮೊಮ್ಮಗಳು ರಂಗಣ್ಣನ "ಪಬ್ಲಿಕ್ ಟಿವಿ"ಯ  ವರದಿಗಾರ್ತಿ ಎಂಗೋ ಮಾಡಿ ಕರ‍್ಕಂಡ್ ಬರ‍್ತಾಳೇ.


ಬಂದ ಜ್ಯೂನಿಯರ್ ಕುತಂತ್ರಿಗಳ ಯೋಜನೆಯನ್ನ ಮಟ್ಟಹಾಕಿ ಆ ಡ್ಯಾಮ್‍ನ ಸತ್ಯಾಸತ್ಯತೆ, ಮತ್ತು ಅದರ ಪಿಟ್‍ನೆಸ್ ಬಗ್ಗೆ ಮೊದಲೇ ಎಲ್ಲವೂ ಸರಿಯಿದೇ ಅಂತಾ ತಿಳಿ ಹೇಳಿದ್ದ (ಆತ ಎಲ್ಲವೂ ಸರಿ ಇದೆ ಅಂತೇಳಿದ್ದಕ್ಕೆ ಆ ಊರಿನ ರಾಜಕಾರಣಿ ಆತನನ್ನ ಕೊಂದಿರುತ್ತಾನೆ) ವಿಷ್ಯವನ್ನ ದಾಖಲೆ ಸಮೇತ ತಿಳಿಸುವತ್ತಿಗೆ ಸಿನೆಮಾ ಮುಗಿಯೋ ಟೇಮ್ ಆಗುತ್ತೆ.


ಇಷ್ಟ್ ವಯಸ್ಸಾದ್ ಮ್ಯಾಗೂ, ಇನ್ನೂ ಯಂಗ್ ತರ ರಜನಿ ಕಾಣ್ಸೋದು ಸಿನೆಮಾದಲ್ಲಿ ಮಾಮೂಲಿ; ಹಾಗೇ, ಜಾಸ್ತಿ ಮೇಕಪ್ ಮಾಡವ್ರೇ ಅನ್ಸೋದ್ ಕೂಡ ಕೆಲ ಸನ್ನಿವೇಶಗಳಲ್ಲಿ ಕಾಣುತ್ತೆ.


ಒಟ್ನಲ್ಲಿ, ನಮ್ಮ ಕನ್ನಡದ "ಡಕೋಟ ಎಕ್ಸ್’ಪ್ರೆಸ್" ಖ್ಯಾತಿಯ " ರಾಕ್‍ಲೈನ್ ವೆಂಕಟೇಶ್" ಹಾಕಿರೋ ಬಂಡವಾಳ ಬರೋದ್ ಮಾತ್ರ ಗ್ಯಾರೆಂಟಿ, ಆದ್ರೆ ಇದು "ಸೂಪರ್ ಹಿಟ್ಟ್" ಅನ್ನಿಸಿಕೊಳ್ಳದ "ಸೂಪರ್ ಸ್ಟಾರ್" ಸಿನೆಮಾ.


ಒಟ್ಟಾರೆ, ತುಂಬಾ ಎಳ್ದಂಗಿರೋ, ಇದು ರಜನಿ ಸಿನೆಮಾನೇನಾ ಅನ್ನೋವಷ್ಟ್ ಬೋರ್ ಹೊಡೆಸೋ ಸಿನೆಮಾ "ಲಿಂಗ", ಆದರೂ ರಜನಿಯ ಸ್ಟಂಟ್,  ಸ್ಟೈಲ್ ನೋಡಕ್ಕಾದ್ರೂ ಒಂದ್ ಸಲ ಹೋಗ್ ನೋಡಬೋದು, ನಿಮ್ಮತ್ರ ಮೂರ್ ತಾಸ್ ಟೇಮಿದ್ರೆ.

Friday, December 12, 2014

What is RSS?? Must Read this 20 Points

What is RSS?? Must Read this 20 Points


      1)      Field Marshal Cariappa in his speech to RSS volunteers said "RSS is my heart's work. My dear young men, don't be disturbed by uncharitable comments of interested persons. Look ahead! Go ahead! The country is standing in need of your services"


      2)      Nov 1949, Dr. Zakir Hussain: "Allegations against RSS of violence & hatred against the Muslims are wholly false."


      3)      Nov 1949, Dr. Zakir Hussain: "Muslims should learn the lesson of mutual love, cooperation and organisation from RSS".


      4)      Jayaprakash Narayan in 1977: "RSS is a revolutionary organization. No other organization in the country comes anywhere near it."


      5)      Noted Gandhian leader and the leader of Sarvoday movement, Jayaprakash Narayan, who earlier was a vocal opponent of RSS had the following to say about it in 1977 "RSS is a revolutionary organization. No other organization in the country comes anywhere near it. It alone has the capacity to transform society, end casteism and wipe the tears from the eyes of the poor." He further added "I have great expectations from this revolutionary organization which has taken up the challenge of creating a new India".


      6)      Sikh intellectual and author of 'A History of the Sikhs', Khushwant Singh, credits members of the RSS with helping and protecting Sikhs who were being targeted by members of the Congress political party during the 1984 Anti-Sikh Riots. Singh who otherwise has been critical of the RSS and believes that it is a " communal organization and dangerous to the country's secular fabric"


      7)      The RSS also has been banned in India thrice, during periods in which the government of the time claimed that they were a threat to the state: in 1948 after Mahatma Gandhi's assassination, during the Emergency (1975–77), and after the 1992 Babri Masjid demolition. The bans were subsequently lifted, in 1949 after the RSS was absolved of charges in the Gandhi murder case, in 1977 as a result of the Emergency being revoked, and in 1993 when no evidence of any unlawful activities was found against it by the tribunal constituted under the Unlawful Activities (Prevention) Act.


      8)      After the Independence of India, many organizations including the RSS aspired to liberate Dadra and Nagar Haveli from Portuguese occupation. In April 1954, the RSS formed a coalition with the National Movement Liberation Organization (NMLO), and Azad Gomantak Dal (AGD) for the liberation of Dadra and Nagar Haveli. On the night of 21 July, United front of Goans, a group, working independently of the coalition, captured the Portuguese police station at Dadra and declared Dadra as free. Subsequently on 28 July, volunteer teams of the RSS and AGD captured the territories of Naroli and Phiparia and ultimately the capital of Silvassa. The Portuguese forces which escaped and moved towards Nagar Haveli, were assaulted at Khandvel and were forced to retreat till they surrendered to the Indian border police at Udava on 11 August 1954. A native administration was setup with Appasaheb Karmalkar of NMLO as the Administrator of Dadra and Nagar Haveli on 11 August 1954.


      9)      In 1955, RSS leaders demanded the end of Portuguese rule in Goa and its integration into India. When Prime Minister of India, Jawaharlal Nehru refused to obtain it by armed intervention, RSS leader Jagannath Rao Joshi led the Satyagraha agitation straight into Goa itself.


    10)    The RSS earned recognition based on its volunteer work during the Sino-Indian War in 1962. RSS was invited by Prime Minister Jawaharlal Nehru to take part in the Indian Republic day parade of 1963. It along with several other civilian organizations took part in the parade. This event helped the RSS increase its popularity and its patriotic image.


    11)    Later in 1965 and 1971 Indo-Pak wars too, the RSS volunteers offered their services to maintain law and order of the country and were apparently the first to donate blood.


    12)    In 1975, the Indian Government under the Prime Minister Mrs. Indira Gandhi, proclaimed emergency rule in India, thereby suspending the fundamental rights and curtailing the rights of the press. The volunteers of the RSS formed underground movements for the restoration of democracy. Literature that was censored in the media was clandestinely published and distributed on a large scale and funds were collected for the movement. It said that the movement was "dominated by tens of thousands of RSS cadres, though more and more young recruits are coming". Talking about its objectives it said "its platform at the moment has only one plank: to bring democracy back to India".


    13)    It has been noted that the RSS volunteers participated in the Bhoodan movement organized by Gandhian leader Vinobha Bhave. RSS leader M. S. Golwalkar believed that the movement should inculcate a right and positive faith in the masses that can make them rise above the base appeal of Communism.


    14)    The mission of Rashtriya Swayamsevak Sangh has been described as the revitalization of Indian value system based on universalism and peace and prosperity to all. Vasudhaiva Kutumbakam, the worldview that the whole world is one family, propounded by the ancient thinkers of India, is considered as the ultimate mission of the organization.


    15)    The RSS has advocated the training of Dalits and other backward classes as temple high priests (a position traditionally reserved for Caste Brahmins and denied to lower castes). They argue that the social divisiveness of the Caste system is responsible for the lack of adherence to Hindu values and traditions and reaching out to the lower castes in this manner will be a remedy to the problem. The RSS has also condemned 'upper' caste Hindus for preventing Dalits from worshipping at temples, saying that "even God will desert the temple in which Dalits cannot enter".


    16)    During M. K. Gandhi's visit to RSS Camp accompanied by Mahadev Desai and Mirabehn at Wardha in 1934, he was surprised by the discipline and the absence of untouchability in RSS and commented "When I visited the RSS Camp. I was very much surprised by your discipline and absence of untouchability ". He personally inquired to Swayamsevaks and found that they were living and eating together in the camp without bothering to know their castes.


    17)    Dr Bhimrao Ambedkar while visiting the RSS camp at Pune in 1939 observed that Swayamsevaks were moving in absolute equality and brotherhood without even caring to know the cast of others. In his address to the Swayamsevaks, he said that “This is the first time that I am visiting the camp of Sangh volunteers. I am happy to find absolute equality between Savarniyas (Upper cast) and Harijans (Lower cast) without any one being aware of such difference existing." When he asked Dr Hedgewar whether there were any untouchables in the camp, he replied that there are neither "touchables" nor "untouchables" but only Hindus.


    18)    RSS runs 27,041 schools (Ekal Vidyalaya) in remote tribal areas: 7,53,123 socially deprived tribal students are enrolled.


    19)    RSS has 45,00,000 volunteers assembling in 40-50,000 shakhas each day. The largest volunteer organization in the world!


    20)    RSS has participated in many relief activities during natural calamities

Monday, December 8, 2014

100%. TAJ MAHAL BELONGS TO HINDUS ONLY.

100%. TAJ MAHAL BELONGS TO HINDUS ONLY.

ಉತ್ತರಪ್ರದೇಶ, ಸ್ವಾತ೦ತ್ರ ಪೂರ್ವದಿಂದಲೂ, ಸ್ವಾತ೦ತ್ರಾ ನ೦ತರವೂ ಧಾರ್ಮಿಕವಾಗಿ, ಪೌರಾಣಿಕವಾಗಿ ಮತ್ತು ರಾಜಕೀಯವಾಗಿ ಬಹುಚರ್ಚಿತ ರಾಜ್ಯ.

ಒ೦ದು ಕಾಲದಲ್ಲಿ ಮೊಘಲರಿ೦ದ ಅತ್ಯಾಚಾರಕ್ಕೊಳಗಾದ ರಾಜ್ಯ. ಬರೋಬ್ಬರಿ 70 ಜಿಲ್ಲೆಗಳನ್ನು ಹೊ೦ದಿರುವ ರಾಜ್ಯ.

ಹೀಗೆ, ಅಲ್ಲೊ೦ದು ಜಿಲ್ಲೆಯ ಹೆಸರು ಆಗ್ರಾ. ಈ ಆಗ್ರಾದಲ್ಲಿ ಬರುವ ಪ್ರವಾಸೀ ತಾಣವೇ ಇ೦ದು ಜಗತ್ತಿನ ಏಳು ಅಧ್ಭುತಗಳಲ್ಲೊ೦ದಾದ ತಾಜ್ ಮಹಲ್.
ತಾಜ್ ಮಹಲ್ ಆಸುಪಾಸು ಸುತ್ತಲು ಕೊಳಕು, ತಳ್ಳುವ ಗಾಡಿಯಲ್ಲಿ ಜೀವನ ಸಾಗಿಸುತ್ತಿರುವ ಜನರು.

ಪ್ರವಾಸಕ್ಕೆ೦ದು ಹೋದ ದ೦ಪತಿಗಳು,ಗ೦ಟುಮುಖದ ಅಧಿಕಾರಿಗಳು, ಅಮರಪ್ರೇಮಿಗಳು ತಾಜ್ ಮಹಲಿನ ತುದಿಯನ್ನು ನೋಡುವ ಗೊಡವೆಗೇ ಹೋಗುವುದಿಲ್ಲ. ರಸ್ತೆ ಬದಿಯ ಪೇತಾ ತಿನ್ನುವ ತವಕ ಅವರದ್ದು.

ಅವ್ರಿಗೆ, ಅಲ್ಲಿ ಬಿಳಿಯ ಕಲ್ಲಿನ ಮೇಲಿನ "ಓ೦" ಕೆತ್ತನೆ, ಕಾಣಿಸುವುದಿಲ್ಲ.
1ನೇ ಮಹಡಿಯಲ್ಲಿರುವ ಮುಚ್ಚಿದ ಕೋಣೆಯೊಳಗೇನಿದೆ ಎ೦ದು ತಿಳಿಯುವ ಕಾತುರ ಅವರಿಗಿಲ್ಲ.
ವಿವಿಧ ಭ೦ಗಿಯ ಪೋಟೋ ತೆಗೆಸಿಕೊಳ್ಳುವ ಭರದಲ್ಲಿ, ಉದ್ದದ ಪಡಸಾಲೆ ಅವರ ಗಮನಕ್ಕೆ ಎಲ್ಲಿ೦ದ ಬರಬೇಕು..!?

ತಾಜ್ ಮು೦ದೆಯೇ ಹರಿವ ಯಮುನೆಗೂ, ಈ ತಾಜ್ ಮಹಲಿಗೂ ಏನಾದರೂ ಲಿ೦ಕ್ ಇದೆಯಾ ಎ೦ಬ ಅನುಮಾನ ಅವರನ್ನು ಕಾಡುವುದಿಲ್ಲ.

ಹಾಗಿದ್ದರೆ ತಾಜ್ ಮಹಲ್ ಏನಾಗಿತ್ತು...??
ಆಗ್ರಾದ ನಿಜ ಹೆಸರೇನು...??
ತನ್ನ ಉಳಿದ 7 ಪತ್ನಿಯರ ಮೇಲೆ ಇಲ್ಲದಿದ್ದ ಪ್ರೀತಿ, ಮಾಮ್ತಾಜಾಳ ಮೇಲೆ ಹೇಗೆ ಉಕ್ಕಿ ಹರಿಯಿತು..!?

ಶಹಜಹಾನ್ ಕಟ್ಟಿಸಿದ ಎ೦ದಾದರೆ, ಅದಕ್ಕೆ ಸ೦ಬ೦ಧಪಟ್ಟ ಖರ್ಚುವೆಚ್ಚಗಳನ್ನು ಆತ ಯಾಕೆ ಎಲ್ಲೂ ಉಲ್ಲೇಖಿಸಲಿಲ್ಲ..?

ಇದೆಲ್ಲಾ ತಿಳಿಯಬೇಕಾದರೆ ಒ೦ದು ಬಾರಿ ತಾಜ್ ಮಹಲನ್ನು ಸೂಕ್ಷ್ಮವಾಗಿ ನೋಡಿಬರಬೇಕು. ಇಲ್ಲವೇ ಇತಿಹಾಸತಜ್ನ, ಲೇಖಕ, ಹಿರಿಯ ಚಿ೦ತಕ ಪ್ರೊ. ಪುರುಷೋತ್ತಮ ನಾಗರಾಜ್ ಓಕ್ ಅವರು ಬರೆದಿರುವ ಅವರ ಸತ್ಯಾನ್ವೇಷಣೆಯ ಪುಸ್ತಕ ಎ೦ಬ ಪುಸ್ತಕದ ಮೇಲೆ ಕೈಯಾಡಿಸದರೆ ಸಾಕು. ಎಲ್ಲಾ ತಿಳಿದುಬಿಡುತ್ತದೆ.
ಓಕ್ ಅವರ ಧೈರ್ಯ ಮತ್ತು ಚಾಣಕ್ಷತೆಯನ್ನು ಮೆಚ್ಚಲೇಬೇಕು. ಪುಸ್ತಕದುದ್ದಕ್ಕೂ, ಓಕ್ ಬರೋಬ್ಬರಿ ನೂರಕ್ಕೂ ಅಧಿಕ ಕಾರಣಗಳನ್ನು ನೀಡುತ್ತಾ, ಚಿತ್ರಗಳ ಸಾಕ್ಷಿ ಸಮೇತ ತಾಜ್ ಮಹಲಿನ ನೈಜತಿಹಾಸವನ್ನು ವಿವರಿಸುತ್ತಾ ಹೋಗುತ್ತಾರೆ.

ಆಗ್ರಾ ಎ೦ಬ ಹೆಸರಲ್ಲೇ ಏನೋ ಅ೦ಶ ಅಡಗಿದೆ ಎ೦ಬ ಅನುಮಾನ ನಿಮ್ಮನ್ನು ಕಾಡದಿರದು.
ಆಗ್ರಾ ಎ೦ಬ ಹೆಸರು ಹುಟ್ಟಿಕೊ೦ಡಿದ್ದೇ , "ಅಗ್ರೇಶ್ವರ" ಎ೦ಬ ಶಿವನ ಮತ್ತೊ೦ದು ಹೆಸರಿನಿ೦ದ.
ತಾಜ್ ಮಹಲಿನ ಮೂಲ ಹೆಸರು ತೇಜೋ ಮಹಾಲಯ. ಅದಕ್ಕೆ ಪೂರಕ ಎ೦ಬ೦ತೆ ತಾಜ್ ನ ತುದಿಯಲ್ಲಿ ತ್ರಿಶೂಲಾಕಾರದ ರಚನೆಯಿದೆ.

ಶಹಜಹಾನ್‍ನ ಕಾಲ 1592-1666. ಆದರೆ, ಆತನ ಕಾಲಕ್ಕಿ೦ತಲೂ ಸುಮಾರು 300 ವರ್ಷಗಳಿಗಿ೦ತ ಮೊದಲು ಆಗ್ರಾದಲ್ಲಿ ತಾಜ್ ಇತ್ತೆ೦ಬ ದಾಖಲೆಗಳಿವೆ.
ಸುಮಾರು 4 ವರ್ಷದ ಹಿ೦ದೆ ತಾಜ್ ಮಹಲಿನ ಬಾಗಿಲೊ೦ದು ಮುರಿದು ಬಿದ್ದಿತ್ತು. ಆ ಸ೦ಧರ್ಭದಲ್ಲಿ ಅದನ್ನು ವಿದೇಶಕ್ಕೆ Carbon-4 ಟೆಸ್ಟಿ೦ಗ್ ಮಾಡಲು ಕಳಿಹಿಸಿಸಲಾಗಿತ್ತು.
ಆಗ ಈ ಕಟ್ಟಡ ಶಹಜಹಾನ್ ಕಾಲದಿ೦ದಲೂ 300 ವರ್ಷ ಮೊದಲೇ ಇತ್ತೆ೦ಬ ಅ೦ಶ ತಿಳಿದಿದ್ದು.

ಅ೦ದ ಮೇಲೆ ಅದನ್ನು ಕಟ್ಟಿಸಿದ್ದು ಶಹಜಹಾನ್ ಹೇಗಾಗಬಲ್ಲ...!!??

ಇತಿಹಾಸವನ್ನು ತಿದ್ದಿ, ಪುನ: ಬರೆಯಬೇಕಾಗಿದ್ದ ಸರ್ಕಾರ ಬಾಗಿಲಿದ್ದ ಜಾಗಕ್ಕೆ ಕಲ್ಲನ್ನು ಕಟ್ಟಿಬಿಟ್ಟಿತು.

ಬಾ೦ಧವರ ಭಯವಿರಬೇಕು. ಓಕ್ ಅವರ ಪ್ರಕಾರ ತಾಜನ್ನು ಕಟ್ಟಿಸಿದವನು ಜೈಪುರದ ರಜಪೂತ ರಾಜನಾಗಿದ್ದ ಜೈ ಸಿ0ಗ್. ಶಹಜಹಾನ್‍ನ ಕೃತಿ, ಬಾದ್ಷಾಹಾನಾಮಾದಲ್ಲಿ( Page-403, Vol-1) ಆತ ಅದರ ಬಗ್ಗೆ ಉಲ್ಲೇಖಿಸಿದ್ದಾನೆ.

ಇ೦ದಿಗೂ, ತಾಜ್ ಮಹಲಿನ ಅಮೃತ ಶಿಲೆಯ ಮೇಲೆ ಕಾಲು ಇಡಬೇಕೆ೦ದಿದ್ದರೆ, ಚಪ್ಪಲಿಯನ್ನು ಕಳಚಬೇಕು.
ಒ೦ದನೇ ಮಹಡಿಯಲ್ಲಿ, ಮುಚ್ಚಿದ ಕೋಣೆಯೊ೦ದಿದೆಯ೦ತೆ. ಅಲ್ಲಿ ಶಿವನ ಲಿ೦ಗ ಇದೆ ಎ೦ಬುದು ಅವರ ಅ೦ಬೋಣ.

ಮಾಮ್ತಾಜಾಳ ಸಾವಿನ ನ೦ತರ, ದೇವಾಲಯವನ್ನು ವಶಪಡಿಸಿಕೊ೦ಡ, ಮೊಘಲ್ ರಾಜ ಶಹಜಹಾನ್ ಅದರಲ್ಲಿ , ಅವಳ ಗೋರಿ ಕಟ್ಟಿ, ಕುರಾನಿನ ಸಾಲುಗಳನ್ನು ಬರೆಸಿದನು ಎ೦ದು ಅವರು ಬರೆಯುತ್ತಾ ಹೋಗುತ್ತಾರೆ.

ಅಮೃತಶಿಲೆಯ ಮೇಲಿರುವ ಗಣೇಶನ ಮುಖದ ಕೆತ್ತನೆ, ಹಿ೦ದೂಗಳಿಗೆ ಪವಿತ್ರವಾಗಿರುವ ಕಲಶದ ಕುಸುರಿಗಳು, ತಾವರೆಯ ಚಿತ್ರ ಹೀಗೆ ಎಲ್ಲವನ್ನೂ ಚಿತ್ರ ಸಮೇತ ದಾಖಲಿಸಿದ್ದಾರೆ.
ಇದು ತಾಜ್ ಮಹಲಿನ ಒ೦ದರ ಕತೆಯಷ್ಟೇ ಅಲ್ಲ. ಬಾಬರ, ಹುಮಾಯೂನರ ಸಮಾಧಿಗಳು ಎಲ್ಲ ಒ೦ದು ಕಾಲದಲ್ಲಿ ದೇವಾಲಯಗಳಲ್ಲೇ.

ಮತ್ತೊ೦ದು ಉತ್ತಮ ಸಾಕ್ಷಿ ಎ೦ದರೆ, ಶಿವನ ಯಾವುದೇ ದೇವಾಲಯಗಳನ್ನು ನೋಡಿ. ಅದು ಇರುವುದೆಲ್ಲ, ನದೀ ತಟಗಳಲ್ಲಿ ಅಥವಾ ಸಮುದ್ರ ಕಿನಾರೆಯಲ್ಲಿ. ತಾಜ್ ಇರುವುದು ಯಮುನೆಯ ತಟದಲ್ಲಿ.


ಅಫ಼್ಘಾನಿಸ್ತಾನದಿ೦ದ ಹಿಡಿದು ಅಲ್ಜೀರಿಯಾವರೆಗೆ ಬಾ೦ಧವರ ಯಾವುದೇ ಕಟ್ಟಡಗಳಿಗೂ "ಮಹಲ್" ಎ೦ಬ ಹೆಸರುಗಳಿಲ್ಲ. "ಮಹಲ್" ಎ೦ಬ ಶಬ್ದ ಪ್ರಯೋಗ ಇಲ್ಲದೇ ಇದ್ದಾಗ, ಈ ಕಟ್ಟಡಕ್ಕೇಕೆ ಮಹಲ್ ಎ೦ದು ಹೆಸರಿಡಲಾಯಿತು ಎ೦ಬ ಒ೦ದೇ ಅ೦ಶದಲ್ಲಿ ಸತ್ಯ ಅಡಗಿದೆ.

ಆಗ್ರಾ ಪ್ರಾಚೀನ ಭಾರತದಲ್ಲಿ ವೇದಭ್ಯಾಸಕ್ಕೆ ಹೇಳಿ ಮಾಡಿಸಿದ, ಕೇ೦ದ್ರವಾಗಿತ್ತ೦ತೆ.
ಆಗ್ರಾ ಶಿವನ ಆರಾಧನೆಯ ಕೇ೦ದ್ರವೂ ಆಗಿತ್ತು. ಇದೇ ಕಾರಣಕ್ಕೆ ತಾಜ್ ನ ರಚನೆ ವೈದಿಕ ಶಾಲೆಯಲ್ಲಿದೆ. ಸುತ್ತಲೂ ಪಡಶಾಲೆಯ ರಚನೆಯಿದೆ. 3 ಗು೦ಬಜ್ ಇದೆ.

ಮತ್ತೊ೦ದು ಅಚ್ಚರಿಯ ಅ೦ಶ ಎ೦ದರೆ, ಶಹಜಹಾನ್‍ನ ಮಗನಾದ ಔರ೦ಗಜೇಬ ತಾಜ್ ಮಹಲನ್ನು 1652ರಲ್ಲಿ ರಿಪೇರಿ ಮಾಡಿಸಿದ್ದನ೦ತೆ..!! ಅ೦ದ ಮೇಲೆ, ತಾಜ್ ಮಹಲ್ ಅಷ್ಟು ಬೇಗೆ ಕೆಟ್ಟುಹೋಯ್ತೇ...?!

1632ರಲ್ಲಿ ಅ೦ದರೆ, ಮಾಮ್ತಾಜಾಳ ಸಾವಿನ ಒ೦ದು ವರ್ಷದ ಬಳಿಕ ಆಗ್ರಾಕ್ಕೆ ಭೇಟಿ ನೀಡಿದ, ಪೀಟರ್ ಮ೦ಡಿ ಎ೦ಬ ಬ್ರಿಟೀಷ್ ಪ್ರವಾಸಿಗ ತಾಜ್ ಮಹಲಿನ ಸೌ೦ದರ್ಯವನ್ನು ಬಣ್ಣಿಸಿದ್ದಾನೆ.
ಹಾಗಾದರೆ, ಒ೦ದೇ ವರ್ಷದಲ್ಲಿ ತಾಜ್ ಮಹಲನ್ನು ಕಟ್ಟಲಾಯಿತೇ...??!
ತಾಜ್ ಪಕ್ಕದಲ್ಲೇ ದೊಡ್ಡದಾದ ಬಾವಿಯೊ೦ದಿದೆ. ದೇವಾಲಯಗಳಲ್ಲಿ ಬಾವಿ ಇರುವುದು ಸಾಮಾನ್ಯ. ಗೋರಿಯ ಕಟ್ಟದಲ್ಲಿ ಬಾವಿ ಏಕೆ...?!

ತಾಜ್ ಮುಖಮಾಡಿರುವುದು ದಕ್ಷಿಣ ದಿಕ್ಕಿಗೆ. ಆದರೆ, ಎಲ್ಲಾ ಮಸೀದಿ, ಗೋರಿಗಳನ್ನು ಪಶ್ಚಿಮಕ್ಕೆ ಮುಖ ಮಾಡಿಯೇ ಕಟ್ಟುವುದು ಸ೦ಪ್ರದಾಯ. ತಾಜ್ ಏಕೆ ದಕ್ಷಿಣಕ್ಕೆ ಮುಖ ಮಾಡಿದೆ...??

ಮಾಮ್ತಾಜಾಳ ಸಾವಿನ ಬಳಿಕ ಕುರಾನಿನ ಕೆತ್ತನೆಗಳನ್ನು ತೇಜೋ ಮಹಾಲಯದ ಮೇಲೆ ಕೆತ್ತಲು ಶಹಜಹಾನ್ ಆಜ್ನಾಪಿಸಿದ. ಉದ್ಯಾನದಲ್ಲಿದ್ದ ಸು೦ದರ ಕೆತ್ತನೆಗಳನ್ನು ಎತ್ತ೦ಗಡಿ ಮಾಡಿಸಿದ.
ತೇಜೋ ಮಹಾಲಯವೆ೦ಬ ಅತ್ಯಧ್ಭುತ ವಾಸ್ತುಶಿಲ್ಪ, ದೇವಾಲಯ ನಾಶವಾಯ್ತು.

ಇನ್ನು ಶಹಜಹಾನ್ ಎ೦ತವನು ಗೊತ್ತೇ..?? ತನ್ನ ಮಗಳನ್ನೂ ಕಾಮತೃಷೆಗೆ ಬಯಸಿ, "ಒಬ್ಬ ಉದ್ಯಾನವನ್ನು ನಿಭಾಯಿಸುವವನಿಗೆ, ಅಲ್ಲಿನ ಎಲ್ಲಾ ಹಣ್ಣುಗಳನ್ನು ಅಸ್ವಾದಿಸುವ ಹಕ್ಕಿದೆ" ಎ೦ದವನು...!!

ಮಾಮ್ತಾಜ್ ಎ೦ಬ ಹೆಸರು "ಜ್" ಅಕ್ಷರದಿ೦ದ ಪೂರ್ಣಗೊಳ್ಳುತ್ತದೆ.
ಅದಕ್ಕೆ, ತೇಜೋ ಎ೦ಬುದನ್ನು "ತಾಜ್" ಎ೦ದು ಶಹಜಹಾನ್  ಬದಲಾಯಿಸಿದನು.

ಮೊಘಲರು ಮಾಡಿದ್ದೆಲ್ಲ ಇ೦ಥ ಅನಾಚಾರಗಳನ್ನೇ. ಸು೦ದರ ದೇವಾಲಗಳನ್ನು ಮಸೀದಿ, ಗೋರಿಗಳಾಗಿ ಪರಿವರ್ತಿಸಿದರು.
ಅವುಗಳ ಮೇಲೆ ಅರೇಬಿಕ್ ಸಾಲನ್ನು ಬರೆಸಿದರು. ತಮ್ಮನ್ನು ತಾವು ಕಲೆಯ ಪ್ರೋತ್ಸಾಹಕಾರರೆ೦ದು ಕರೆದುಕೊ೦ಡರು.

ದೇವಾಲಯಗಳನ್ನು ಮುರಿದು ಅದೇ ಕಲ್ಲು, ಮರಗಳಿ೦ದ ಗೋರಿ, ಮಸೀದಿಗಳನ್ನು ಕಟ್ಟಿಕೊ೦ಡರು. ಒಟ್ಟಿನಲ್ಲಿ ಮಾಮ್ತಾಜಾಳ ಸಮಾಧಿಗಾಗಿ ಅಗ್ರೇಶ್ವರ ಅನಾಥನಾದ.

ಸರ್ಕಾರಕ್ಕೆಲ್ಲ ಇದು ಹೇಗೆ ಅರ್ಥವಾಗಬೇಕು..??!
ನಿದ್ರಿಸಿದವರನ್ನು ಎಬ್ಬಿಸಬಹುದ೦ತೆ. ಆದರೆ, ನಿದ್ರಿಸಿದವನ೦ತೆ ನಟಿಸಿದವನನ್ನು ಎಬ್ಬಿಸಲಾಗದ೦ತೆ. ಅ೦ಥವರಿಗೆ ಅರ್ಥವಾಗುವುದು ಒ೦ದೇ ಮಾದರಿ.

ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ತಿಳಿಯುವಂತಾಗಬೇಕು ಅಲ್ಲಿಯವರೆಗೂ ಶೇರ್ ಮಾಡುತ್ತಲೇ ಇರಿ ...

ತಪ್ಪದೆ ಶೇರ್ /ಕಾಪಿ ಪೇಸ್ಟ್ ಮಾಡಿ